ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಅಹಾರ ವಿತರಣೆ

ಲಕ್ಷ್ಮೇಶ್ವರ: ಪಟ್ಟಣದ ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಕೊರೋನಾ ಸೇನಾನಿಗಳಿಗೆ ಬದಿಬೀದಿ ವ್ಯಾಪಾರಸ್ಥರಿಗೆ ಮತ್ತು ನಿರ್ಗತಿಕರಿಗೆ ಆಹಾರ ವಿತರಿಸಲಾಯಿತು.
ಈ ವೇಳೆ ಡಾ.ಚಂದ್ರು ಲಮಾಣಿ ಮಾತನಾಡಿ, ಕೊರೋನಾದಿಂದ ಕೆವಲ ಆರೋಗ್ಯ ಸಮಸ್ಯೆ ಅಲ್ಲದೇ ಕೈಗಳಿಗೆ ಉದ್ಯೋಗವಿಲ್ಲದೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನ ದುಡಿದು ಊಟ ಮಾಡುವ ಜನರು ಕಷ್ಟದಲ್ಲಿದ್ದಾರೆ. ಇದರಿಂದ ನಿತ್ಯ 60 ಕೆ.ಜಿ ಪಲಾವ ಸಿದ್ದಪಡಿಸಿ ಪುರಸಭೆ ಸಿಬ್ಬಂದಿ ಪೊಲೀಸರು ಸೇರಿದಂತೆ ಮುಂತಾದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಹಾಗೂ ದೊಡ್ಡೂರ ಸೂರಣಗಿ ಕೊಂಚಿಗೇರಿ ಸೇರಿ ಗ್ರಾಮೀಣ ಪ್ರದೇಶದಲ್ಲಿ ತೆರಳಿ ಸಿದ್ದಪಡಿಸಿದ ಆಹಾರದ ಬಾಕ್ಸ್ ವಿತರಿಸಿದರು.
ವೀರಣ್ಣ ಪವಾಡದ, ನವೀನ ಬೆಳ್ಳಟ್ಟಿ, ಅರುಣ ಪಾಟೀಲ, ಗಿರೀಶ ಚೌರೆಡ್ಡಿ, ಕೆ.ಆರ್.ಲಮಾಣಿ ಸೇರಿದಂತೆ ಮುಂತಾದವರಿದ್ದರು.

Exit mobile version