ಮದ್ಯ ಸೇವನೆಯಿಂದ ಮೃತಪಟ್ರೆ ವಿಮೆ ಪರಿಹಾರ ಇಲ್ಲ..!

ನವದೆಹಲಿ: ಅತಿಯಾದ ಮದ್ಯಪಾನದಿಂದ  ಮೃತಪಟ್ಟಿದ್ದರಿಂದ ವಿಮೆ ಪರಿಹಾರದ ಕ್ಲೇಮ್ ಮಾನ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ.

ಮದ್ಯಪಾನ ಮಾಡಿ ಮೃತಪಟ್ಟವರಿಗೆ ವಿಮೆ ಪರಿಹಾರ ಸಿಗಲ್ಲ, ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರ ಪರಿಹಾರ ನೀಡಲು ವಿಮೆ ಕಂಪನಿ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಅಪಘಾತದಿಂದ ಸಾವು ಸಂಭವಿಸಿದ ಕಾರಣ ವಿಮೆ ಪರಿಹಾರ ನೀಡಬೇಕಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಆಯೋಗ ತೀರ್ಪು ನೀಡಿದ್ದು ಇದನ್ನು ಸುಪ್ರೀಂಕೋರ್ಟ್ ನಲ್ಲಿ ನರ್ಮದಾ ದೇವಿ ಅವರು ಪ್ರಶ್ನಿಸಿದ್ದು, ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ.

ಹಿಮಾಚಲ ಪ್ರದೇಶದ ಅರಣ್ಯ ನಿಗಮದ ಸಿಬ್ಬಂದಿ 1997 ರಂದು ಅಕ್ಟೋಬರ್ ನಲ್ಲಿ ಅತಿಯಾದ ಮದ್ಯ ಸೇವನೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದರು. ಈ ಬಗ್ಗೆ ಸಂಬಂಧಿ ನರ್ಮದಾ ದೇವಿ ಪರಿಹಾರಕ್ಕೆ ಕೋರ್ಟ್ ಮೊರೆ ಹೋಗಿದ್ದರು.

Exit mobile version