ಬೆಂಗಳೂರು: ಕಾಂಗ್ರೆಸ್ ಪಕ್ಷ ತಮ್ಮ ತಪ್ಪುಗಳನ್ನು ಸಮರ್ಥಿಸುವುದೇ ತನ್ನ ಸಿದ್ದಾಂತ ಎಂದುಕೊಂಡಿದೆ ಎಂದು ಬಿಜೆಪಿ ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟೀಕಿಸಿದೆ.
ಕಾಂಗ್ರೆಸ್ ಯಾವ ಮಟ್ಟಕ್ಕೆ ದಿಕ್ಕೆಟ್ಟು ಹೋಗಿದೆ ಎಂದರೆ ಸದನದಲ್ಲಿ ತನ್ನ ಶಾಸಕ ಬಟ್ಟೆ ಬಿಚ್ಚಿದ್ದನ್ನೂ ಸಮರ್ಥಿಸಿಕೊಳ್ಳುತ್ತಿದೆ. ಅನುಚಿತವಾಗಿ ವರ್ತಿಸಿದ ಶಾಸಕನನ್ನು ಅಮಾನತು ಮಾಡಿರುವ ಸ್ಪೀಕರ್ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಇದು ಸಂಪೂರ್ಣ ಜನವಿರೋಧಿ ಕಾಂಗ್ರಸ್ ಆಗಿದೆ ಎಂದು ಬಿಜೆಪಿ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
