ಶಿರಹಟ್ಟಿ: ತಾಲೂಕಿನ ಸೇವಾ ನಗರ (ಕೆರಳ್ಳಿತಾಂಡೆ), ತಾರಿಕೊಪ್ಪ, ಬನ್ನಿಕೊಪ್ಪ ಗ್ರಾಮಗಳಲ್ಲಿ ಶಾಸಕ ರಾಮಣ್ಣ ಲಮಾಣಿ ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಮತಕ್ಷೇತ್ರದಲ್ಲಿನ ಪ್ರತಿಯೊಂದು ಗ್ರಾಮಕ್ಕೆ ಸಿಸಿ ರಸ್ತೆ, ಶುದ್ಧ ನೀರು, ಸಮರ್ಕಕ ವಿದ್ಯುತ್ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೆ ಗ್ರಾಮದಲ್ಲಿ ಪ್ರತಿಯೊಂದು ವಾರ್ಡಿಗೆ ಸಂಬAಧಿಸಿದAತೆ ಸುಗಮ ಸಂಚಾರಕ್ಕೆ ಸಿಸಿ ರಸ್ತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಚರಂಡಿ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಇಷ್ಟು ದಿನ ಕೊರೊನಾ ಕಾರಣದಿಂದ ಅಭಿವೃದ್ಧಿ ಕಾಮಗರಿಗಳು ಆಮೆ ಗತಿಯಲ್ಲಿ ಸಾಗಿದ್ದವು, ಸದ್ಯ ಅಂತಹ ಯಾವುದೇ ಅಡೆತಡಗಳಿಲ್ಲದ ಕಾರಣ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಸರಕಾರ ಎಸ್ಸಿ, ಎಸ್ಟಿ ಜನಾಂಗದ ಏಳಿಗೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಗುಣಮಟ್ಟತೆಯಿಂದ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಾರಿಕೊಪ್ಪ ಗ್ರಾಪಂ ಅಧ್ಯಕ್ಷ ಭೀಮಪ್ಪ ಲಮಾಣಿ, ಶಾಸಕರ ಆಪ್ತ ಸಹಾಯಕ ಲಕ್ಣ್ಮಣ ಲಮಾಣಿ, ಪುರಪ್ಪ ಲಮಾಣಿ, ವಿಜಯ ಲಮಾಣಿ, ಕವಿತಾ ಲಮಾಣಿ, ಶಾರದಾ ಲಮಾಣಿ, ಚಂದ್ರು ಕಾರಬಾರಿ, ಅಣ್ಣಪ್ಪ ರಣತೂರ, ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ ಹೊಂಬಾಳಿಮಠ, ಪರಪ್ಪ ಹೊನಗಣ್ಣವರ, ವಿನಾಯಕ ಇಟಿ, ಗುಡಿದಿರಪ್ಪ ಹಂಸಿ, ಮಂಜಪ್ಪ ಕಮತರ, ಮೈಲಾರಪ್ಪ ಹೊಸಮನಿ, ಪ್ರಸಾದ ಕಲಾಲ, ರಮೇಶ ಕರಾಟೆ, ಶಿವಾನಂದ ಗೌಡನಾಯ್ಕರ ಸೇರಿದಂತೆ ಮುಂತಾದವರಿದ್ದರು.
