ಕೋಟೆ ನಾಡಿನಲ್ಲಿ ತುಂತುರು ಮಳೆ


ಗಜೇಂದ್ರಗಡ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಗಜೇಂದ್ರಗಡದಲ್ಲಿ ತುಂತುರು ಮಳೆ ಸುರಿಯಿತು.

ಗಜೇಂದ್ರಗಡದಲ್ಲಿ ಬೆಳಿಗ್ಗೆಯಿಂದಲೇ ದಟ್ಟನೆಯ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದಲ್ಲದೇ, ತಂಪನೆಯ ಗಾಳಿ ಬೀಸುತ್ತಿದ್ದು, ಬೆಳಿಗ್ಗೆಯಿಂದಲೇ ಸೂರ್ಯದೇವನ ದರ್ಶನವಾಗಿಲ್ಲ. ಮದ್ಯಾಹ್ನದ ಹೊತ್ತಿಗೆ ತುಂತುರು ಮಳೆ ಸುರಿಯಿತು. ಇದರಿಂದ ಮತ್ತಷ್ಟು ತಂಪಿತ ವಾತಾವರಣ ನಿರ್ಮಾಣವಾಗುವ ಮೂಲಕ ಜನರು ಪರದಾಡುವಂತಾಗಿಯಿತು.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ತಿಳಿಸಿದೆ.

Exit mobile version