ನರೇಗಲ್: ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕು- ಪಾಟೀಲ

ನರೇಗಲ್: ಮತದಾನ ಎಂಬುದು ಸಂವಿಧಾನ ನೀಡಿರುವ ಅತ್ಯಮೂಲ್ಯವಾದ ಹಕ್ಕು ಅದನ್ನು  ಸಮರ್ಥವಾಗಿ ಬಳಸಿಕೊಂಡು ಎಲ್ಲರೂ ತಪ್ಪದೆ  ಮತದಾನ ಮಾಡುವ ಅಗತ್ಯವಿದೆ ಎಂದು ಪ್ರಾಚಾರ್ಯ ವೈ.ಸಿ.ಪಾಟೀಲ ಹೇಳಿದರು.

ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸ್ಥಳೀಯ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಪಾವಿತ್ರ್ಯತೆ, ಮಹತ್ವ ಅರಿಯದ ಹಲವರು ಮತದಾನದಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಉತ್ತಮ ಅಭ್ಯರ್ಥಿ ಚುನಾಯಿಸುವ ಸುವರ್ಣಾವಕಾಶಗಳು ಕೈತಪ್ಪುತ್ತವೆ ಎಂದರು.  ದೇಶದ ಭವಿಷ್ಯ ಯುವಕರ ಕೈಯಲ್ಲಿದೆ  ಗ್ರಾಮ ಪಂಚಾಯ್ತಿ ಚುನಾವಣೆಯೂ ತನ್ನ ಪಾತ್ರವನ್ನು ವಹಿಸಲಿದೆ ಆದ್ದರಿಂದ ಮತದಾನ ಬಗ್ಗೆ ನಕಾರಾತ್ಮಕ ಮನೋಭಾವ ತೋರದೆ ಸಕ್ರಿಯರಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಕರೆ ಕೊಟ್ಟರ.

ಬಸವರಾಜ ಗಿರಿತಮ್ಮಣ್ಣವರ, ಎಸ್.ಸಿ.ಗುಳಗಣ್ಣವರ, ಎಂ.ವಿ.ಜೂಜನಿ, ಪಿ.ಎನ್.ಬಳೂಟಗಿ, ಬಸವರಾಜ ಹೊಳಿ, ಎಫ್.ಎನ್.ಹುಡೇದ, ಎಂ.ಎ.ನದಾಫ್, ಸಂಗಮೇಶ ವಸ್ತ್ರದ, ಅನುಪಮಾ ಮೂಡಬಿದರೆ ಇದ್ದರು.

Exit mobile version