ಅಗಸ್ತ್ಯ ತೀರ್ಥ ಬಾವಿಯಲ್ಲಿ ನೀರುಪಾಲಾದ ಯುವಕ

laxmeshwar death

ಅಗಸ್ತ್ಯ ತೀರ್ಥ ಬಾವಿಯಲ್ಲಿ ನೀರುಪಾಲಾದ ಯುವಕ

ಲಕ್ಷ್ಮೇಶ್ವರ : ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ಬಂದಿದ್ದ ಯುವಕ ನೀರುಪಾಲಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಬಾವಿಯಲ್ಲಿ ಯುವಕನೋರ್ವ ನೀರು ಪಾಲಾಗಿದ್ದಾನೆ ಎಂಬ ಶಂಕೆ ಇದೆ. ನಾಲ್ಕು ಜನರು ಈಜಲು ಬಂದಿದ್ದು, ಇದರಲ್ಲಿ ಓರ್ವ ನೀರು ಪಾಲಾಗಿದ್ದಾನೆ ಎನ್ನಲಾಗಿದ್ದು, ಹರ್ಷವರ್ಧನ ಎನ್ನುವ ಯುವಕ ನೀರು ಪಾಲಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಹರ್ಷವರ್ಧನ ಗೆಳೆಯರ ಜೊತೆಯಲ್ಲಿ ಈಜಲು ಬಂದಿದ್ದು, ಈ ವೇಳೆ ಬಾವಿಯಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇದನ್ನು ಕಂಡು ಜೊತೆಗೆ ಬಂದಿದ್ದ ಗೆಳೆಯರು ಗಾಬರಿಯಿಂದ ಓಡಿದರು. ಹುಡುಗುರು ಓಡುವುದನ್ನು ಕಂಡ ಸಾರ್ವಜನಿಕರು ಬಾವಿಯ ಬಳಿಗೆ ಬಂದು ನೋಡಿದ್ದಾರೆ. ದಡದ ಮೇಲೆ ಬಟ್ಟೆ ಮತ್ತು ಚಪ್ಪಲಿಗಳು ಕಂಡ ಸಾರ್ವಜನಿಕರು ಯುವಕ ನೀರಿನಲ್ಲಿ ಮುಳಗಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ಅಗಸ್ತ್ಯತೀರ್ಥ ಬಾವಿಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Exit mobile version