13 ವರ್ಷಗಳಿಂದ ಪ್ರೀತಿ…ಎರಡು ಬಾರಿ ಗರ್ಭಪಾತ…ಮದುವೆಯ ದಿನವೇ ನಾಪತ್ತೆ!

ಉಡುಪಿ: ಇಬ್ಬರೂ ಕಳೆದ 13 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿಯ ಪಾತ್ರವಾಗಿ ಎರಡು ಬಾರಿ ಯುವತಿಯ ಗರ್ಭಪಾತವೂ ಆಗಿದೆ. ಆದರೆ, ಮದುವೆಯೇ ದಿನವೇ ಹುಡುಗ ಕೈ ಕೊಟ್ಟ ಘಟನೆ ನಡೆದಿದೆ.
ಈ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಹೀಗಾಗಿ ಯುವತಿಯ ಮನೆಯವರು ವರನಿಗಾಗಿ ಪೋಲೀಸ್ ಠಾಣೆಯ ಮೊರೆ ಹೋಗಿದ್ದಾರೆ.

ಕಾರ್ಕಳದ ಗಣೇಶ್ ಹಾಗೂ ಮಣಿಪಾಲದ ಯುವತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ, ಈ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ಕೂಡ ಸೂಚಿಸಿದ್ದರು. ಹೀಗಾಗಿ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ, ವಿವಾಹದ ದಿನವೇ ಗಣೇಶ್ ನಾಪತ್ತೆಯಾಗಿದ್ದಾನೆ. ಈಗ ಮದುವೆ ನಿಂತು ಹೋಗಿದ್ದು, ಯುವತಿ, ವರನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

ಪರಸ್ಪರ ಪ್ರೀತಿಸುತ್ತಿರುವುದರಿಂದಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಏರ್ಪಟ್ಟಿತ್ತು. ಈ ಪ್ರೀತಿಯನ್ನು ಯುವತಿ ನಿಜವಾದ ಪ್ರೀತಿ ಎಂದು ಭಾವಿಸಿದ್ದಳು. ಆತ ಮದುವೆಯಾಗುವುದಾಗಿ ಕೂಡ ಹೇಳಿದ್ದ. ಮದುವೆಯ ದಿನ ಕೂಡ ನಿಗದಿಯಾಗಿತ್ತು.

ಇದಕ್ಕೂ ಮೊದಲು ಯುವಕನ ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿತ್ತು. ಈ ಮದುವೆ ನ. 4ಕ್ಕೆ ನಿಶ್ಚಯವಾಗಿತ್ತು. ಈ ಸಂದರ್ಭದಲ್ಲಿ ರಹಸ್ಯವಾಗಿ ವಿವಾಹವಾಗಲು ಆತ ತಯಾರಾಗಿದ್ದ. ಇದನ್ನು ನಿಲ್ಲಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಳು.

ಆಗ ಗಣೇಶ್, ತನ್ನ ದೀರ್ಘಾವಧಿಯ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದ. ನ. 6ಕ್ಕೆ ವಿವಾಹ ನಿಶ್ಚಯವಾಗಿತ್ತು. ಆದರೆ, ಗಣೇಶ್ ಈ ಸಂದರ್ಭದಲ್ಲಿಯೇ ಪರಾರಿಯಾಗಿದ್ದಾನೆ. ಸದ್ಯ ಈ ಪ್ರಕರಣ ಪೊಲೀಸ್ ಮೆಟ್ಟಿಲು ಏರಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version