ಗಜೇಂದ್ರಗಡ: ಹಣ ದೋಚಿ ಪರಾರಿಯಾದವರ ಬಂಧನ

gajendragad police station

ಗಜೇಂದ್ರಗಡ: ಹಣ ದೋಚಿ ಪರಾರಿಯಾದವರ ಬಂಧನ

ಗಜೇಂದ್ರಗಡ: ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದವರನ್ನು ಯಾಮಾರಿಸಿ ಲಕ್ಷಾಂತರ ಹಣ ದೋಚಿ ಪರಾರಿಯಾಗಿದ್ದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಎಸ್‌ಬಿಐ ಬ್ಯಾಂಕಿನಿಂದ ಹಣ ವಿತ್‌ಡ್ರಾ ಮಾಡಿಕೊಂಡು ಹೋಗುವಾಗ ಗಮನ ಬೇರೆಡೆ  ಸೆಳೆದು ಹಣ ಲಪಟಾಯಿಸಿದ 2 ಪ್ರತ್ಯೇಕ ಪ್ರಕರಣಗಳನ್ನು ಸ್ಥಳೀಯ ಠಾಣೆ ಪಿಎಸ್‌ಐ ಗುರುಶಾಂತ್ ದಾಶ್ಯಾಳ ನೇತೃತ್ವದ ಪೊಲೀಸರ ತಂಡ ಬೇಧಿಸಿ, ಓರ್ವ ಮಹಿಳಾ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 2,20,000 ರೂ, ಹಣ ವಶಕ್ಕೆ ಪಡೆಯಲಾಗಿದೆ. ಆರೋಪಿತರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Exit mobile version