ಅ.25ರಂದು ನೀಲಾನಗರ ದುರ್ಗಾದೇವಿ ಜಾತ್ರೆ ಸರಳವಾಗಿ ಆಚರಣೆ

kumar maharaj dasara

ಮಸ್ಕಿ: ಸಮೀಪ ನೀಲಾನಗರದ ದುರ್ಗಾದೇವಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಬಂಜಾರ ಪೀಠಾಧಿಪತಿ ಕುಮಾರ ಮಹಾರಾಜ ತಿಳಿಸಿದರು.

ದಸರಾ ಹಬ್ಬದ ನಿಮಿತ್ಯ ಪ್ರತಿ ವರ್ಷ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತಿತ್ತು, ಈ ಭಾರಿ ಕೊರೊನಾ ಹಿನ್ನೆಲೆಯಲ್ಲಿ ಅ.25ರಂದು ದೇವಿಯ ಮೂರ್ತಿಗೆ ಅಲಂಕರಿಸಿ ಪೂಜೆ ಪುರಸ್ಕಾರ ಅಭಿಷೇಕ ಮಾಡಲಾಗುವುದು.

ಯಾವುದೇ ವೇದಿಕೆ ಕಾರ್ಯಕ್ರಮ, ‌ಸಾಮಾಜಿಕ ನಾಟಕ ಇರುವುದಿಲ್ಲ. ಅಂದಿನ ದಿನ ದೇವಿಯ ದರ್ಶನ ಪಡೆಯಲು ಬರುವ ಭಕ್ತರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಜಾತ್ರೆ ಆಚರಣೆ ಮಾಡಬೇಕೆಂದು ಮನವಿ ಮಾಡಿದರು.

ರಾಯಚೂರು, ಯಾದಗಿರಿ ಜಿಲ್ಲೆಯಿಂದ ಬರುವ ಭಕ್ತರು ಜಾತ್ರೆ ಇಲ್ಲ ಎಂದು ಗೊಂದಲಕ್ಕೆ ಒಳಗಾಗಬಾರದು.‌ ದೇವಿಯ ಜಾತ್ರೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Exit mobile version