ರಾಜ್ಯದಲ್ಲಿ ಇಂದು ಕೇವಲ 4 ಸಾವಿರ ಗಡಿ ದಾಟಿದ ಮಹಾಮಾರಿ!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುವತ್ತ ಹೆಜ್ಜೆ ಹಾಕಿದೆ. ಇಂದು ರಾಜ್ಯದಲ್ಲಿ 4,471 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 52 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 

ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7,98,378ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ರಾಜ್ಯದಲ್ಲಿ ಇನ್ನೂ 86,749 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ ಕೊರೊನಾ 10,873 ಸೋಂಕಿತರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಐಸಿಯುನಲ್ಲಿ 935 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸೋಂಕಿನ ಖಚಿತ ಪ್ರಮಾಣ ಶೇ. 3.97ರಷ್ಟಾಗಿದೆ. ಮೃತಪಟ್ಟವರ ಪ್ರಮಾಣ ಶೇ.1.16ರಷ್ಟಿದೆ. ಇಂದು ಒಟ್ಟು 1,12,545 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇಂದು ಬಾಗಲಕೋಟೆ 57, ಬಳ್ಳಾರಿ 129, ಬೆಳಗಾವಿ 73, ಬೆಂಗಳೂರು ಗ್ರಾಮಾಂತರ 102, ಬೆಂಗಳೂರು ನಗರ 2,251, ಬೀದರ್ 7, ಚಾಮರಾಜನಗರ 34, ಚಿಕ್ಕಬಳ್ಳಾಪುರ 78, ಚಿಕ್ಕಮಗಳೂರು 85, ಚಿತ್ರದುರ್ಗ 84, ದಕ್ಷಿಣ ಕನ್ನಡ 136, ದಾವಣಗೆರೆ 52, ಧಾರವಾಡ 93, ಗದಗ 14, ಹಾಸನ 136, ಹಾವೇರಿ 30, ಕಲಬುರಗಿ 71, ಕೊಡಗು 33, ಕೋಲಾರ 45, ಕೊಪ್ಪಳ 49, ಮಂಡ್ಯ 163, ಮೈಸೂರು 173, ರಾಯಚೂರು 25, ರಾಮನಗರ 22, ಶಿವಮೊಗ್ಗ 79, ತುಮಕೂರು 232, ಉಡುಪಿ 81, ಉತ್ತರ ಕನ್ನಡ 48, ವಿಜಯಪುರ 62 ಮತ್ತು ಯಾದಗಿರಿಯಲ್ಲಿ 27 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Exit mobile version