ಚೆನ್ನೈ ತಂಡದ ಕೆಲವರು ಸರ್ಕಾರಿ ನೌಕರಿ ಸಿಕ್ಕಂತೆ ಮಾಡುತ್ತಿದ್ದಾರೆ – ಸೆಹ್ವಾಗ್!

ಮುಂಬಯಿ : ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ನಾಲ್ಕು ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಾಲು ಸಾಲು ಸೋಲುಗಳನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಗೆಲ್ಲುವ ಪಂದ್ಯವನ್ನೇ ಕೈ ಚೆಲ್ಲಿದೆ. ಹೀಗಾಗಿ ಸೆಹ್ವಾಗ್ ಕೂಡ ವ್ಯಂಗ್ಯವಾಡಿದ್ದಾರೆ. 

ಚೆನ್ನೈ ಆರಂಭದಿಂದಲೂ ಗೆಲ್ಲುವ ತಂಡವಾಗಿತ್ತು. ಉತ್ತಮವಾಗಿಯೇ ಆಟವಾಡುತ್ತಿತ್ತು. ಆದರೆ, ಕೊನೆಯಲ್ಲಿ ಕೇದರ್ ಜಾದವ್, ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಸೋಲಿಗೆ ಕಾರಣವಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸೆಹ್ವಾಗ್ ಅವರು, ಚೆನ್ನೈ ತಂಡದ ಕೆಲ ಬ್ಯಾಟ್ಸ್ ಮನ್ಸ್ ತಮಗೆ ಸಿಕ್ಕಿರುವ ಸ್ಥಾನವನ್ನು ಸರ್ಕಾರಿ ಉದ್ಯೋಗ ಎಂದು ಭಾವಿಸಿದ್ದಾರೆ. ಉತ್ತಮ ಪ್ರದರ್ಶನ ನೀಡದರೂ, ನೀಡದಿದ್ದರೂ ಅವರಿಗೆ ತಲುಪಬೇಕಾದ ವೇತನ ತಲುಪತ್ತದೆ ಎಂದು ಅವರಿಗೆ ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಅಷ್ಟೇ ಅಲ್ಲದೇ, ಕೇದಾರ್ ಅವರ ಬ್ಯಾಟಿಂಗ್ ವೈಖರಿಯನ್ನು ಸೆಹ್ವಾಗ್ ಅವರು, ತಾವು ಇತ್ತೀಚೆಗೆ ಬರೆದಿದ್ದ ಫೇಸ್ಬುಾಕ್ ಸೀರಿಸ್ ವಿರು ಕೀ ಬೈಥಕ್ನ್ಲ್ಲಿಯೂ ಟೀಕೆ ವ್ಯಕ್ತಪಡಿಸಿದ್ದಾರೆ. ಜಾದವ್ ಉಪಯೋಗಕ್ಕೆ ಬಾರದ ಅಲಂಕಾರಿಕ ವಸ್ತು ಇದ್ದಂತೆ ಇದ್ದಾರೆ. 12 ಎಸೆತಗಳಲ್ಲಿ 7 ರನ್ ಗಳಿಸಿದ ಜಾದವ್ಗೆದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕಿತ್ತು ಎಂದು ಟೀಕೆ ಮಾಡಿದ್ದಾರೆ.

Exit mobile version