ಶ್ರೀಶೈಲಂ ಪವರ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ!

Shrishailam fire Station

ಶ್ರೀಶೈಲಂ ಪವರ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ

ತೆಲಂಗಾಣ: ಶ್ರೀಶೈಲಂ ಪವರ್‌ ಸ್ಟೇಷನ್‌ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ಜನರನ್ನು ರಕ್ಷಿಸಲಾಗಿದೆ. ಅಲ್ಲದೇ, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ 6 ಜನ ಶ್ರೀಶೈಲಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಒಳಗೆ ಸಿಲುಕಿ ಹಾಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಡ್ಯಾಂ ಕೆನೆಲ್ ನಲ್ಲಿ ಬೆಳಿಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಇದರಿಂದಾಗಿ ಐವರು ಎಂಜನೀಯರ್ ಗಳು, ಇಬ್ಬರು ತಂತ್ರಜ್ಞರು ಸೇರಿದಂತೆ ಒಟ್ಟು 9 ಜನ ಬೆಂಕಿಯಲ್ಲಿ ಸಿಲುಕಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಪ್ಯಾನೆಲ್ ಬೋರ್ಡ್ ಗೆ ಬೆಂಕಿ ತಗುಲಿ, ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ದುರಂತದ ವೇಳೆ ಕೆನೆಲ್ ನಲ್ಲಿದ್ದ 10 ಜನ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಒಟ್ಟು 19 ಜನ ಒಳಗಿದ್ದರು. ಈ ಪೈಕಿ 10 ಜನರ ರಕ್ಷಣೆಯಾಗಿದ್ದು, 9 ಜನರಿಗಾಗಿ ಶೋಧ ನಡೆದಿದೆ. ಶ್ರೀಶೈಲಂ ಪವರ್ ಸ್ಟೇಷನ್ ನಲ್ಲಿ 6 ಯೂನಿಟ್ ಗಳಿಗೂ ಬೆಂಕಿ ಹರಡುತ್ತಿದ್ದು, ಎಲ್ಲೆಡೆ ಹೊಗೆ ತುಂಬಿಕೊಂಡಿದೆ.

Exit mobile version