ನವದೆಹಲಿ: ಖಿನ್ನತೆ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ.
ಅವರು ಈ ಹಿಂದೆ ತಾವು ಅನುಭವಿಸಿದ್ದ ಖಿನ್ನತೆ ಬಗ್ಗೆ ಹಲವು ಬಾರಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇತ್ತೀಚೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಖಿನ್ನತೆಯ ಕುರಿತು ಚರ್ಚೆ ಬಂದಿದೆ.
ಈ ಕುರಿತು ದೀಪಿಕಾ ಪಡುಕೋಣೆ ಮತ್ತೊಮ್ಮೆ ಮಾತನಾಡಿದ್ದಾರೆ. ಮಾನಸಿಕ ಖಿನ್ನತೆ ಬಗ್ಗೆ ಸಂದೇಶ ನೀಡಿರುವ ಅವರು, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತಹ ಕಾಯಿಲೆಗಳಂತೆ ಖಿನ್ನತೆ ಸಹ ಒಂದು ಕಾಯಿಲೆ. ಇದನ್ನು ಮುಕ್ತವಾಗಿ ಹೇಳಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.
2015ರಿಂದ ದೀಪಿಕಾ ಖಿನ್ನತೆ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಪರಿಹಾರಕ್ಕೆಂದು ಲಿವ್ ಲವ್ ಲಾಫ್ ಫೌಂಡೇಶನ್ (ಟಿಎಲ್ಎಲ್ಎಲ್ಎಫ್)ನ್ನು ಆರಂಭಿಸಿದ್ದಾರೆ.