ಸಾವರಕರ್ ಬದಲಾಗಿ ರಾಹುಲ್, ಸೋನಿಯಾಗಾಂಧಿ ಹೆಸರಿಡಬೇಕಾ?: ಸಿ.ಸಿ.ಪಾಟೀಲ್

ಗದಗ: ಸಾವರ್ಕರ್ ಹೆಸರಿಡದೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್ ನವರು ತಿಳಿಯಲಿ ಎಂದು ಗದಗನಲ್ಲಿ ಗಣಿ‌ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ವೀರ ಸಾವರ್ಕರದ ಬಗ್ಗೆ ಮಾತಾಡುವ ಯೋಗ್ಯತೆ ಒಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲ
ಕಾಂಗ್ರೆಸ್ ನವರಿಗೆ ನೆಹರೂ ಸಂಸ್ಕ್ರತಿಯ ಮಾತ್ರ ಗೊತ್ತಿದೆ. ತ್ಯಾಗ ಬಲಿದಾನ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಜಮಾನ್ಯ ತಿಲಕ ಇವರು ಯಾರೂ ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ.
ಸಾವರ್ಕರ್ ಬಿಜೆಪಿಯವರಾ? ಅಥವಾ ಆ ಸಂದರ್ಭದಲ್ಲಿ ಬಿಜೆಪಿ ಇತ್ತಾ? ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್ ರಾಜೀವ್ ಗಾಂಧಿ ರೋಡ್ ಅಂತೆಲ್ಲಾ ಇದೆ. ಎಲ್ಲಾದ್ರೂ ನರೇಂದ್ರ ಮೋದಿ ರೋಡ್, ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಕಾಂಗ್ರೆಸ್ ನವರೇವ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ.? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಹೇಳೋದು ಆಚಾರ ತಿನ್ನೋದು ಮಾತ್ರ ಬದನೆಕಾಯಿ ಎಂದು ಕುಟುಕಿದರು.

Exit mobile version