ಬೆಂಗಳೂರು: ಸದ್ಯದಲ್ಲಿಯೇ ಬೆಂಗಳೂರಿಗೆ ಕೊರೊನಾ ಎಕ್ಸ್ ಪ್ರೆಸ್ ಬರಲಿದೆ.
ಕರ್ನಾಟಕದ ಗ್ರೀನ್ ಜೋನ್ ಗೆ ದಾಳಿಯಿಟ್ಟ ಮುಂಬಯಿ ಬಾಂಬ್, ಜೂನ್ ನಲ್ಲಿ ಮತ್ತೆ ಬೆಂಗಳೂರಿಗೆ ದಾಂಗುಡಿ ಇಡಲಿದೆ. ಜೂನ್ ನಲ್ಲಿ ಕೊರೊನಾ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಬರಲಿದ್ದು, ಮುಂಬಯಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸಿಲಿಕಾನ್ ಸಿಟಿಗೆ ಬರಲಿದ್ದಾರೆ.
ಜೂ. 1ರಿಂದ ಮುಂಬಯಿಯಿಂದ ಬೆಂಗಳೂರು ಹಾಗೂ ಮುಂಬಯಿಂದ ಗದಗ ರೈಲು ಸೇವೆ ಆರಂಭವಾಗಲಿದೆ. ಹೀಗಾಗಿ ಈಗ ಬರಲು ಅವಕಾಶ ಸಿಗದವರು ಜೂನ್ನ ಲ್ಲಿ ಬರುವ ಸಾಧ್ಯತೆ ಇದೆ. ಉದ್ಯೋಗ ಅರಸಿ ಬಹುಸಂಖ್ಯೆಯ ಮುಂಬಯಿ ಕಾರ್ಮಿಕರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಕ್ವಾರಂಟೈನ್ ಕೇಂದ್ರಗಳು ಈಗಾಗಲೇ ತುಂಬಿ ತುಳುಕುತ್ತಿವೆ. ಈ ನಡುವೆ ಮುಂಬಯಿಯಿಂದ ಬರುವ ರೈಲಿನಿಂದಾಗಿ ಮತ್ತಷ್ಟು ಜನರು ಕ್ವಾರಂಟೈನ್ ಆಗಲಿದ್ದಾರೆ. ಆದರೆ, ಅವರಿಂದಲೂ ಆತಂಕ ಮನೆ ಮಾಡಿದೆ.