ಮಾವು ಬೆಳೆಗೆ ಬೂದು ರೋಗ: ನಿಯಂತ್ರಣ ಹಾಗು ಮುಂಜಾಗೃತೆ ಕ್ರಮಗಳು

ಪ್ರಸ್ತುತ ಮೋಡಕವಿದ ವಾತಾವರಣ, ಕಡಿಮೆ ಉಷ್ಣಾಂಶ ಉಷ್ಣಾಂಶ ಮತ್ತು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿರುವುದರಿಂದ, ಇಂತಹ ಹವಾಮಾನದಲ್ಲಿ ಈಗಾಗಲೇ ಬಿಟ್ಟಿರುವ ಹೂ ಅರಳುವಾಗ ಅತಿಯಾದ ಚಳಿ ಇರುವುದರಿಂದ ಅಂತಹ ಸಮಯದಲ್ಲಿ ಪರಾಗ ಸ್ಪರ್ಶಕ್ಕೆ ಬರುವ ಕೀಟಗಳ ಸಂಖ್ಯೆ ತುಂಬಾ ವಿರಳ. ಒಂದು ವೇಳೆ ಈ ಹೂಗಳನ್ನು ಉಳಿಸಿಕೊಳ್ಳಲು ಹೆಚ್ಚೆಚ್ಚು ಸಿಂಪರಣೆ ಕೈಗೊಂಡರೂ ಸಹ ಕಾಯಿ ಕಚ್ಚುವ ಪ್ರಮಾಣ ತೀರಾ ಕಡಿಮೆಯಿದ್ದು, ಕಾಯಿ ಬೆಳೆವಣಿಗೆಗೆ ಪೂರಕವಾದ ಉಷ್ಣಾಂಶದ ಕೊರತೆಯಿಂದಾಗಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಹಾಗೂ ಹೆಚ್ಚಿನದಾಗಿ ರೈತರು ಆದಾಯ ಗಳಿಸಿಕೊಳ್ಳಲು ಸಾದ್ಯವಾಗುವುದಿಲ್ಲ.

ಮಾವಿನ ಮಹಿಮೆ ಗೊತ್ತಾ ನಿಮಗೆ? ಹಣ್ಣುಗಳ ರಾಜನನ್ನು ತಿನ್ನಿ ಆರೋಗ್ಯವಾಗಿರಿ!!

ಇದು ಬೇಸಿಗೆ ಸಮಯ. ಕೊರೊನಾ ಕೂಡ ಈ ಸಮಯದಲ್ಲಿಯೇ ದೇಶವನ್ನು ಕಾಡುತ್ತಿದೆ. ಹೊರಗೆ ಬಿಸಿಲು, ಸೆಖೆ, ಉರಿ. ಆದರೆ ಬೇಸಿಗೆ ಸಮಯದಲ್ಲಿ ಖುಷಿಯ ವಿಚಾರ ಹಣ್ಣುಗಳ ರಾಜ ಮಾವಿನ ಹಣ್ಣು ಬೆಳೆಯ ಸಮಯ. ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿದೆ.