ಬೃಹತ್ ಮೇರವಣಿಗೆ ಮೂಲಕ ಸಿ.ಸಿ.ಪಾಟೀಲ ನಾಮಪತ್ರ ಸಲ್ಲಿಕೆ ನಾಳೆ

ಉತ್ತರಪ್ರಭ ನರಗುಂದ:
ನರಗುಂದ ವಿಧಾನಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಸಿ.ಸಿ.ಪಾಟೀಲ ನಾಳೆ ದಿ. 19-4-2023ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಪುರಸಭೆಯ ಮುಂಭಾಗದಿಂದ ಮೇರವಣಿಗೆ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

ತದನಂತರ ಹುಬ್ಬಳ್ಳಿ ರಸ್ತೆಯಲ್ಲಿರುವ ಶ್ರೀ ಅಣ್ಣಪ್ಪ ಕಾಂಬಳೆ ಇವರ ಜಮೀನಿನಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ನಾಮಪತ್ರ ಸಲ್ಲಿಸುವ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ನರಗುಂದ ಮತಕ್ಷೇತ್ರದ ನರಗುಂದ ಮಂಡಲ, ಹೊಳೆಆಲೂರ ಮಂಡಲ ಮತ್ತು ಲಕ್ಕುಂಡಿ ಮಂಡಲದ ಎಲ್ಲ ಮತದಾರ ಬಾಂಧವರು, ಪಕ್ಷದ ಪ್ರಮುಖರು, ಕಾರ್ಯಕರ್ತರು, ಪಕ್ಷದ ಹಿರಿಯರು, ಮುಖಂಡರು, ಅಭಿಮಾನಿಗಳನ್ನು ಒಳಗೊಂಡ ಬೃಹತ್ ಮೆರವಣಿಗೆಗೆ ಸಾರ್ವಜನಿಕರು ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಆಶೀರ್ವದಿಸಿ ಎಂದು ಕೋರಿದ್ದಾರೆ.

Exit mobile version