80 ವರ್ಷ ಮೇಲ್ಪಟ್ಟ ಮತದಾರರ ಮತದಾನ ಜಾಗ್ರತಿಯಲ್ಲಿ: ಅಭಯ ಪಾಟೀಲ ಅಭಿಮತ

ಉತ್ತರಪ್ರಭ ಸುದ್ದಿ ರೋಣ:

ರೋಣ ಮತಕ್ಷೇತ್ರ ಅಭಿವೃದ್ಧಿಯಿಂದ ತುಂಬಾ ಹಿಂದುಳಿದಿದ್ದು ಅಭಿವೃದ್ಧಿಗಾಗಿ ಈ ಬಾರಿ ಮತ್ತೆ ಜಿ ಎಸ್ ಪಾಟೀಲರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರತಿಯೊಬ್ಬರು ಶ್ರಮಿಸೋಣ ಎಂದು ಅಭಯ ಪಾಟೀಲ ಹೇಳಿದರು. ಅವರು ಸ್ಥಳೀಯ ಕಾಲೇಜು ರಸ್ತೆಯಲ್ಲಿರುವ ಶಿವನಗೌಡ ಪಾಟೀಲರ ಪೆಟ್ರೋಲ್ ಬಂಕ್ ನಲ್ಲಿ ೮೦ ವರ್ಷ ಮೇಲ್ಪಟ್ಟ ಮತದಾರರಿಗೆ ಮತದಾನ ಜಾಗೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೆಗಲ್ಲ ಪಟ್ಟಣದ ಹಾಗೂ ಮಜರೆ ಹಳ್ಳಿಯಲ್ಲಿ 300ಕ್ಕೂ ಹೆಚ್ಚು ೮೦ ವರ್ಷ ಮೇಲ್ಪಟ್ಟ ಮತದಾರರಿದ್ದು, ಅವರನ್ನು ಮನೊಲಿಸುವ ಮೂಲಕ ಮತದಾನದ ಕುರಿತು ಅರಿವು ಮೂಡಿಸುವುದರ ಜೊತೆಗೆ ಪಕ್ಷಕ್ಕೆ ಕೈಜೋಡಿಸುವಂತೆ ಹಾಗೂ ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಕೈಗೊಂಡ ಅಭೀವೃದ್ದಿ ಕಾರ್ಯಗಳನ್ನು ತಿಳಿಸಿಕೊಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅವರು ಒಲವು ತೋರುವಂತೆ ಮಾಡೋಣ ಜಿ,ಎಸ್, ಪಾಟೀಲರು ಶಾಸಕರಿದ್ದಾಗ ಕ್ಷೇತ್ರದಲ್ಲಿ ಕೃಷಿಹೊಂಡ,ಪ್ರತಿ ವಾರ್ಡುಗಳಲ್ಲಿ ಸಿ,ಸಿ ರಸ್ತೆ,ಶುದ್ಧ ಕುಡಿಯುವ ನೀರು, ಹಾಗೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ.ಆದರೆ ಈಗ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ ಕ್ಷೇತ್ರದ ಅಭಿವೃದ್ಧಿಗೆ ನಾವು ನಿವೆಲ್ಲರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು

ಶಿವನಗೌಡ ಪಾಟೀಲ ಮಾತನಾಡಿ ಹಾಲಿ ಶಾಸಕರು ಜನರ ಮಧ್ಯ ಬರದೆ ಚುನಾವಣೆ ಬಂದಾಗ ಮಾತ್ರ ಜನರಲ್ಲಿ ಬರುತ್ತಾರೆ ಅದು ಮತಯಾಚನೆಗಾಗಿ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ, ಜನಸಾಮಾನ್ಯರ ಬದುಕು ದುಸ್ಥಿತಿಯಲ್ಲಿರುವಾಗ ಅವರಿಗೆ ಬೇಕಾದ ಮೂಲ ಸೌಲಭ್ಯಗಳಾದ ಮನೆ, ರಸ್ತೆ ದುರಸ್ತಿ ಮುಂತಾದವುಗಳಿಗೆ ಆದ್ಯತೆ ನೀಡುವುದರ ಬದಲಾಗಿ ಮೇಲ್ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಅಕ್ಷಯ್ ಪಾಟೀಲ ನಿಂಗನಗೌಡ ಲಕ್ಕನಗೌಡ್ರ, ಅಲ್ಲಾಭಕ್ಷಿ ನದಾಫ, ಖಾದಿರಸಾಬ ಹೂಲಗೇರಿ, ಸಂತೋಷ ಹನುಮಸಾಗರ, ಶೇಖಪ್ಪ ಜುಟ್ಲ, ಶರಣಪ್ಪ ಗಂಗರಗೊಂಡ, ಗುಡದಪ್ಪ ಗೋಡಿ, ಬೈಲಪ್ಪ ಕುರಿ, ನಾಗಪ್ಪ ಮಾರನಬಸರಿ, ಕಳಕನಗೌಡ ಪೊಲೀಸ್ಪಾಟೀಲ, ರಾಚಯ್ಯ ಮಾಲಗಿತ್ತಿಮಠ, ಮುತ್ತಪ್ಪ ನೂಲ್ಕಿ, ಮುತ್ತಪ್ಪ ಹಡಪದ, ಮಂಜುನಾಥ ಧರ್ಮಾಯತ, ಚಂದ್ರು ಬಿಷ್ಟಕ್ಕನವರ, ಅಶೊಕ ಬಾರಕೇರ, ಆಶೀಫ ಹೊಸಮನಿ, ಆನಂದ ನಡವಲಕೇರಿ ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ಸದ್ಯಕ್ಕೆ ಲಾಕ್ ಡೌನ್ ಇಲ್ಲ: ಡಿಸಿ ಸುಂದರೇಶ ಬಾಬು

ಜಿಲ್ಲೆಯಲ್ಲಿ ಒಂದು ಹಂತಕ್ಕೆ ಕೋರೊನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದ್ದು ತಕ್ಷಣಕ್ಕೆ ಯಾವುದೇ ಬಗೆಯ ಲಾಕ್ ಡೌನ್ ಜಾರಿ ಮಾಡುತ್ತಿಲ್ಲ ಎಂದು ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ನರೇಗಲ್ಲ: ಲಗೂನಾ ಬ್ರೀಡ್ಜ್ ಕೆಲ್ಸಾ ಮುಗಿಸ್ರಿ: ಕೊಂಕಣಾ ಸುತ್ತಿ ಮೈಲಾರಕ್ ಬರುವಂಗಾಗೈತಿ!

ನಿಗದಿತ ಸಮಯಕ್ಕೆ ಮೇಲ್ಸೆತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಗ್ರಾಮಸ್ಥರ ಸ್ಥಿತಿ ಕೊಂಕಣಾ ಸುತ್ತಿ ಮೈಲಾರಕ್ಕೆ ಹೋದ್ರು ಅನ್ನುವಂತಾಗಿದೆ.

ಉಪನ್ಯಾಸಕರ ನೇಮಕಕ್ಕೆ ಶೀಘ್ರ ಕ್ರಮ

ಶಾಸಕ ಮಹೇಶ್ ಅವರ ನೇತೃತ್ವದಲ್ಲಿ ಅನುದಾನಿತ ಕಾಲೇಜುಗಳು ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳು ಡಿಸಿಎಂ ಅವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.

ಮತಗಟ್ಟೆ ವಿಭಜನೆಯಲ್ಲಿ ಜಿಲ್ಲಾಡಳಿತ ವಿಫಲ: ಸಾಗದ ಸರದಿ ಸಾಲು

ಉತ್ತರಪ್ರಭ ಸುದ್ದಿ ಮುಂಡರಗಿ: ತಾಲೂಕಿನ ಮುರುಡಿತಾಂಡಾ ಮತಗಟ್ಟೆ ಸಂಖ್ಯೆ 265, ರೋಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಇಲ್ಲಿ…