ಉತ್ತರಪ್ರಭ
ಗದಗ:
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾ.ಪಂ ಹಿಂದಿನ ಪ್ರಬಾರಿ ಪಿಡಿಓ ಶಾಬುದ್ದೀನ ಕವಡೇಲಿ ರನ್ನು ವರ್ಗಾವಣೆ ಮಾಡುವ ಹಾಗೂ ಇವರ ಅಧಿಕಾರದ ಅವಧಿಯಲ್ಲಿ ಅಕ್ರಮವಾಗಿ ಸರ್ಕಾರದ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ದಾಖಲು ಮಾಡಿದ್ದರ ಬಗ್ಗೆ ಸಮಗ್ರ ತನಿಖೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈತ ಸೇನಾ ಜಿಲ್ಲಾ ಸಂಚಾಲಕ ಮಂಜಯ್ಯಸ್ವಾಮೀ ಅರವಟಗಿಮಠ ದೂರು ಸಲ್ಲಿಸಿದ್ದು, ಪಂ.ರಾಜ್ ಸಹಾಯಕ ನಿರ್ದೇಶಕರು ತಾ.ಪಂ ಇವರನ್ನು ಪರೀಶಿಲನೆಗೆ ನೇಮಿಸಲಾಗಿತ್ತು.


ಈ ಹಿನ್ನೆಲೆ ಪರೀಶಿಲಿಸಿದ ಪ್ರಕಾರ ಸ್ಥಿರ ಸ್ವತ್ತುಗಳ ಅರ್ಜನೆ ಮತ್ತು ವರ್ಗಾವಣೆ ನಿಯಮಗಳನ್ನು ಉಲ್ಲಂಘನೆ ಹಾಗೂ ಸರ್ಕಾರಿ ಜಮೀನನ್ನು ಯಾರಿಗೂ ಹಂಚಿಕೆ ಮಾಡಲು ಅವಕಾಶ ವಿರುವದಿಲ್ಲ ಎಂಬ ಸ್ಪಷ್ಠ ಸರ್ಕಾರದ ನಿರ್ದೇಶನವನ್ನೆ ಉಲ್ಲಂಘಿಸಿರುವದರಿಂದ ಹಿಂದಿನ ಪ್ರಭಾರ ಪಂಚಾಯತ ಅಭಿವೃಧ್ದಿ ಅಧಿಕಾರಿ ಹಾಗೂ ಪ್ರಸ್ತುತ ಕೋರ್ಲಹಳ್ಳಿ ಗ್ರಾ.ಪಂ ಗ್ರೇಟ್-2 ಕಾರ್ಯದರ್ಶಿ ಎಸ್.ಕೆ.ಕವಡೇಲಿಯರನ್ನು ಜಿಲ್ಲಾ ಪಂಚಾಯತಿ ಸಿ.ಇ.ಓ ಸುಶಿಲಾ ಬಿ ಅಮಾನತು ಮಾಡಿ ದಿ. 17-01-2023 ಆದೇಶ ಹೋರಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಬಿಗ್‌ಬಾಸ್ ಚೈತ್ರಾ

ಚೈತ್ರಾ ಮಾರ್ಚ್ 28 ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬುವರೊAದಿಗೆ ಮದುವೆಯಾಗಿದ್ದರು. ಮದುವೆ ದಿನವೆ ವಿವಾದಕ್ಕೀಡಾಗಿದ್ದ ಚೈತ್ರಾ ಪೊಲೀಸ್ ಠಾಣೆಯ ಮಟ್ಟಿಲೇರಿದ್ದರು. ಮದುವೆ ವಿಚಾರವಾಗಿ ಮನನೊಂದ ನಟಿ, ಕವಯಿತ್ರಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಕೋಲಾರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲ ಸಮುದಾಯಗಳ ಅಭಿವೃದ್ಧಿ ಪರ ಬಜೆಟ್ : ಕಾಂತಿಲಾಲ ಬನ್ಸಾಲಿ

ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಆಶಯದೊಂದಿಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು 2021-22ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ಪರಿಸರ ದಿನವೇ 23 ಮರಗಳ ಹಾಫ್ ಮರ್ಡರ್ : ವಿಂಡ್ ಕಂಪನಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ

ಉತ್ತರಪ್ರಭ ನಿಂಗಪ್ಪ ಬಿ.ಮಡಿವಾಳರ ಗಾಳಿಯಂತ್ರ ಸಾಗಿಸಲು ಗಾಳಿ ಕೊಡುವ ಮರದ ಟೊಂಗೆಗಳು ಬಲಿ ಐತಿಹಾಸಿಕ ಗಿಡಗಳನ್ನು…

ಗದಗ ನಗರ ಸಭೆ ಚುನಾವಣೆ: ವ್ಹಿಲ್ ಚೆರ್ ನಲ್ಲಿ ಬಂದು ಮತಚಲಾಯಿಸಿದ ವೃದ್ದರು

ಗದಗ: ನಗರಸಭೆ ಯ ಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಯ…