ಸಂಭ್ರಮದಿಂದ ತೇಜಸ್ವಿ ಸೂರ್ಯ ಹುಟ್ಟು ಹಬ್ಬ ಆಚರಣೆ

ಉತ್ತರಪ್ರಭ ಸುದ್ದಿ

ಮುಂಡರಗಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರ ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರ 32 ನೇ ಹುಟ್ಟು ಹಬ್ಬದ ನಿಮಿತ್ತ ಅಭಿಮಾನಿಗಳಿಂದ ಸಂಭ್ರಮದ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.

ಸಂಸದ ತೇಜಸ್ವಿ ಸೂರ್ಯ ಅವರ 32 ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಮುಂಡರಗಿ ಪಟ್ಟಣದಲ್ಲಿ ತೇಜಸ್ವಿ ಸೂರ್ಯ ಅಭಿಮಾನಿ ಬಳಗ ವತಿಯಿಂದ ಜೋಪಡಿ ನಿವಾಸಿಗಳಿಗೆ ಸೀರೆ ಹಾಗೂ ದಿನಸಿ ಕಿಟ್ಟುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ರಾಮಣ್ಣ ಲಮಾಣಿ,ಬಿಜೆಪಿ ರಾಜ್ಯ ಯುವ ಕಾರ್ಯಕಾರಿಣಿ ಸದಸ್ಯ ಪವನ್ ಮೇಟಿ, ಪಕ್ಷದ ಹಿರಿಯ ಮುಖಂಡರಾದ ಕೆ.ವಿ.ಹಂಚಿನಾಳ, ಕುಮಾರಸ್ವಾಮಿ ಹೀರೆಮಠ, ದೇವಪ್ಪ ಇಟಗಿ, ನಾಗರಾಜ ಮುರಡಿ ಹಾಗೂ ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ಸದಸ್ಯರಾದ ಶಿವಾನಂದ ಪೂಜಾರ, ಕೃಷ್ಣಾ ರಾಠೋಡ, ಮಾರುತಿ ಹೊಸಮನಿ, ಮಹಾಂತೆಶ ಪವಾಡಿ, ಸುಭಾಷ್ ಕ್ವಾಟಿ, ವಸಂತ ನಾಯಕ, ಬಿರಣ್ಣ ದಳವಾಯಿ, ವಾಸು ಬಾದಾಮಿ ನಿಂಗರಾಜು, ಮೆಗಳಮನಿ ಕನಕರಾಯ ಬಂಡಿವಡ್ಡರ, ಮಂಜುನಾಥ್ ಕಟ್ಟಿಮನಿ, ಹರೀಶ್ ಕೊರಿಶೆಟ್ಟರ್, ಮೈಲಾರಿ ಮಾಯಮ್ಮನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version