ಟ್ರ್ಯಾಕ್ಟರ್ ಪಲ್ಟಿ ಸ್ಥಳದಲ್ಲೇ ಚಾಲಕ ಸಾವು..!

ಉತ್ತರಪ್ರಭ
ಲಕ್ಷ್ಮೇಶ್ವರ: ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೇಶ್ವರ ಯಳವತ್ತಿ ರೈತ ಸಂಪರ್ಕ ರಸ್ತೆಯಲ್ಲಿ ಮಣ್ಣು ತುಂಬಿದ ಟ್ರ್ಯಾಕ್ಟರ್ ಒಂದು ಗುಡ ಮೇಲಾಗಿ ಬಿದ್ದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪ ಘಟನೆ ಗುರುವಾರ ಜರುಗಿದೆ.

ಘಟನೆ ವಿವರ: ಗೊಜನೂರನಿಂದ ಟ್ರಾಕ್ಟರ್ನಲ್ಲಿ ಮಣ್ಣು ಹೆರಿಕೊಂಡು ಲಕ್ಷ್ಮೇಶ್ವರ ಯಳವತ್ತಿ ರಸ್ತೆಯ ಭಾಗದಲ್ಲಿ ಮಣ್ಣು ಹಾಕಲು ಹೊರಟಾಗ ಚಾಲಕನ ನಿಯಂತ್ರಣ ತಪ್ಪಿ ಚಾಲಕ ಬೀರಪ್ಪ ಮೌನಪ್ಪ ದೊಟೆಕಲ್ಲ ಅಲಿಯಾಸ್ ಪೂಜಾರ (25) ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಚಾಲಕ ಗೊಜನೂರ ಗ್ರಾಮದವನ್ನು ಎಂದು ತಿಳಿದು ಬಂದಿದೆ ಘಟನಾ ಸ್ಥಳಕ್ಕೆ ಸುದ್ದಿ ತಿಳಿಯುತ್ತಿದ್ದಂತೆ ಏಕೈಕ ಮಗನನ್ನು ಕಳೆದುಕೊಂಡ ತಾಯಿ ಅಕ್ರಂದನ್ನ ಮುಗಿಲು ಮುಟ್ಟಿತ್ತು. ಈ ದೃಶ್ಯವನ್ನು ನೋಡಿದ ಜನತೆಯ ಕಣ್ಣಾಲ್ಲೆಗಳು ತೆವವಾದವಲ್ಲದೇ ಈ ಘಟನೆಯ ಬಗ್ಗೆ ಮಮ್ಮಲ್ಲ ಮರುಗಿದರು, ಘಟನಾ ಸ್ಥಳಕ್ಕೆ ಪಿ.ಎಸ್.ಐ ಪ್ರಕಾಶ ಡಿ ಭೇಟಿ ನೀಡಿ ಪ್ರಕರಣ ದಾಖಲಸಿಕೊಂಡಿದ್ದಾರೆ.

Exit mobile version