ನಿಡಗುಂದಿ : ಯಲ್ಲಾಲಿಂಗ ಮಹಾರಾಜರ ಶಿಷ್ಯರಾದ ಪಟ್ಟಣದ ಭೀಮಾಶಂಕರ ಮಹಾರಾಜರ 37 ನೇ ಪುಣ್ಯತಿಥಿ ನಿಮಿತ್ತ ನಡೆಯುವ ಜಾತ್ರೆಯ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಅ.1 ಶನಿವಾರ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಪಟ್ಟಣದ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಲಿದೆ. ಪ್ರಥಮ 15001, ದ್ವಿತೀಯ 10001ರೂ, ತೃತೀಯ 7001 ರೂ, ಚತುರ್ಥ 5001 ರೂ ಬಹುಮಾನವಿದ್ದು, ನಾನಾ ವೈಯಕ್ತಿಕ ಬಹುಮಾನಗಳು ಇವೆ.
ಅ.2 ರಂದು ಬೆಳಿಗ್ಗೆ ರಾಜ್ಯ ಮಟ್ಟದ ಕೊಕ್ಕೊ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ 25,001 ರೂ, ದ್ವಿತೀಯ 15001 ರೂ, ತೃತೀಯ 10,001 ರೂ, ಚತುರ್ಥ 5001 ರೂ ಬಹುಮಾನವಿದೆ. ಅದೇ ದಿನ ಮುಕ್ತ ರಸಪ್ರಶ್ನೆ ಸ್ಪರ್ದೆ ಜರುಗಲಿದೆ.
ಅ.3 ರಂದು ಮುಕ್ತ ರಂಗೋಲಿ ಸ್ಪರ್ಧೆ, ಪುರಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಮ್ಯುಸಿಕಲ್ ಚೇರ್ ಸ್ಪರ್ಧೆ ಜರುಗಲಿದ್ದು, ನಾನಾ ಬಹುಮಾನಗಳು ಇವೆ. ಹೆಚ್ಚಿನ ವಿವರಗಳಿಗೆ 7204900975 ಗೆ ಸಂಪರ್ಕಿಸಲು ಕೋರಲಾಗಿದೆ.
ಜಾತ್ರೆಗೆ ಸಾಂಸ್ಕೃತಿಕ ಮೆರುಗು: ಜಾತ್ರೆ ಜನಪದ ಸಾಂಸ್ಕೃತಿಕ ಮೆರುಗು ಹೊಂದಿದ್ದು
ಭೀಮಾಶಂಕರ ಮಹಾರಾಜರ ಜಾತ್ರೆಯ ಮಹತ್ವದ ಘಟ್ಟ ಅ. 4 ರಂದು ಜರುಗಲಿದೆ. ಬೆಳಿಗ್ಗೆ ಗದ್ದುಗೆಗೆ ಲಿಂಗಾಭಿಷೇಕ, 10 ಕ್ಕೆ ಭೀಮಾಶಂಕರ ಮಹಾರಾಜರ ರಜತ ಮೂರ್ತಿ ಹಾಗೂ ಪಲ್ಲಕ್ಕಿಯ ಅದ್ಧೂರಿ ಮೆರವಣಿಗೆ ನಡೆಯಲಿದೆ. ರುದ್ರಮುನಿ ಸ್ವಾಮೀಜಿ, ಹಿಪ್ಪರಗಿಯ ಪ್ರಭು ಮಹಾರಾಜರು, ಸೀತಮ್ಮನಗಿರಿಯ ಡಾ ಎ.ಸಿ. ವಾಲಿ, ಸಾಡಾದ ಪ್ರಕಾಶ ಮಹಾರಾಜರು ಆಶೀರ್ವಚನ ನೀಡುವರು.
ರಾತ್ರಿ ಯಲ್ಲಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ವಿಜಯಲಕ್ಷ್ಮಿ ಭಜನಾ ಮಂಡಳಿ ಅವರ ಭಜನಾ ನಡೆಯಲಿದೆ.
ಅ.3 ರಂದು ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅ.5 ರಂದು ಬೆಳಿಗ್ಗೆ ನಾನಾ ಭಾರ ಎತ್ತುವ ಸ್ಪರ್ಧೆಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.