ನಭಾಪುರ ತಾಂಡಾದಲ್ಲಿ ಆಕಸ್ಮಿಕ ಬೆಂಕಿಗೆ 5 ಎಕರೆ ಕಬ್ಬು ಸುಟ್ಟು ಭಸ್ಮ

ಉತ್ತರಪ್ರಭ
ಗದಗ: ತಾಲೂಕಿನ ನಭಾಪೂರ ತಾಂಡಾದ ರೈತ ರುಪಣ್ಣ ಸೋಮಪ್ಪ ಲಮಾಣಿಯವರ ಹೋಲದಲ್ಲೊ ಹೊಲದಲ್ಲಿ ಬೆಳೆದಿದ್ದ ಕಬ್ಬು ಆಕಸ್ಮಿಕ ಬೆಂಕಿಗೆ ತಗುಲಿ ಸುಮಾರು 5 ಎಕರೆ ಕಬ್ಬು, ಸುಟ್ಟು ಭಸ್ಮವಾದ ಘಟನೆ ನಭಾಪುರ ತಾಂಡಾದಲ್ಲಿ ನಡೆದಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಯುತ್ತಿದ್ದಂತೆ ದೌಡಾಯಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ 5 ಎಕರೆ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಭರ್ಜರಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ಕಬ್ಬು ಸುಟ್ಟಿದ್ದರಿಂದ ಈಗ ಕಂಗಾಲಾಗಿದ್ದಾನೆ. ಕಷ್ಟ ಪಟ್ಟು ದುಡಿದ ಹೊಲದ ಬೆಳೆ ಸುಟ್ಟು ಹೋಗಿದೆ. ಸರ್ಕಾರ ಈ ರೈತನ ನೆರವಿಗೆ ಬರಬೇಕಾಗಿದೆ. ರೈತನ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಪ್ರಯತ್ನಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.

Exit mobile version