ರೋಗಿಗಳಿಗೆ ಹಣ್ಣು ಹಾಲು ಬಿಸ್ಕಿಟ ವಿತರಣೆ

ಲಕ್ಷ್ಮೇಶ್ವರ : ತಾಲೂಕಿನ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಇವರ ವತಿಯಿಂದ ನಗರದ ಸರಕಾರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಇರುವ ರೋಗಿಗಳಿಗೆ ಹಾಲು ಹಣ್ಣು ಬಿಸ್ಕಿಟ ವಿತರಿಸಿದರು

ನಮ್ಮ ಸಂಸ್ಥೆಯಿಂದ ಗಣರಾಜ್ಯೋತ್ಸವದ ಅಂಗವಾಗಿ ರೋಗಿಗಳಿಗೆ ಹಣ್ಣು ಬಿಸ್ಕಿಟ್ ಹಾಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮುಂದಿನ ದಿನ ಮಾನಗಳಲ್ಲಿ ನಿರ್ಗತಿಕರು, ಬಡವರು,ಅನ್ಯಾಯ ಕೊಳಗಾದ ಜನರಿಗೆ ನಮ್ಮ ಸಂಸ್ಥೆಯಿಂದ ಸಹಾಯ ಮಾಡಲಾ ಗುವುದು, ಒಳ್ಳೆಯ ಕಾರ್ಯಕ್ರಮ ಗಳನ್ನು ನಮ್ಮ ಸಂಸ್ಥೆಯ ಮಾಡಲಿದೆ

ತಾಲೂಕ ಅಧ್ಯಕ್ಷ ಸೋಮಣ್ಣ ಬೆಟಗೇರಿ

ಈ ಸಂದರ್ಭದಲ್ಲಿ ರಾಜ್ಯ ಅರೋಗ್ಯ ಘಟಕ ಕಾರ್ಯದರ್ಶಿ ನಿರಂಜನ ವಾಲಿ, ತಾಲೂಕ ಉಪಾಧ್ಯಕ್ಷ ಪದ್ಮರಾಜ ಪಾಟೀಲ್,ಪ್ರದಾನ ಕಾರ್ಯದರ್ಶಿ ವೀರೇಂದ್ರ ಕಾಳಮ್ಮನವರ ಖಜಾಂಚಿ ಮಲ್ಲನಗೌಡ ಪಾಟೀಲ್, ಪ್ರಕಾಶ ವಾಲಿ,ಮಲ್ಲಿಕಾರ್ಜುನ ದಡ್ದುರ, ಜಗದೀಶ ಈಳಗೇರ,ವೇದವ್ಯಾಸ ಉಮಚಗಿ, ಗಂಗಪ್ಪ ಹೂಗಾರ, ಆರೋಗ್ಯ ಸಮುದಾಯ ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು

Exit mobile version