ಉತ್ತರ ಪ್ರಭ ಸುದ್ದಿ
ರೋಣ : ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ರೋಣ ತಾಲೂಕಾ ಭಾರತೀಯ ಕಿಶಾನ್ ಸಂಘದವತಿಯಿಂದ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ರಿಗೆ ಮನವಿ ಸಲ್ಲಿಸಿದರು.
ರೈತರ ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡದೇ ಅನ್ನದಾತರನ್ನು ಸಾಲಗಾರನ್ನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿವೆ ಈಗಿನ ಸರ್ಕಾರಗಳು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಎಷ್ಟೋ ಕಂಪನಿಗಳು ತಾವು ತಯಾರಿಸಿದ ಉತ್ಪನ್ನಗಳಿಗೆ ತಾವೇ ದರ ನಿಗಧಿ ಮಾಡಿಕೊಳ್ಳುತ್ತವೆ ಅವುಗಳಂತೆ ನಮ್ಮ ಕೃಷಿ ಉತ್ಪನ್ನಗಳಿಗೆ ಬೆಳೆದ ರೈತರೇ ಬೆಲೆ ನಿಗದಿಮಾಡುವಂತಹ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಮಾಡಿದರು.
ಇಲ್ಲವಾದರೆ ಸರ್ಕಾರ ರೈತರ ಖರ್ಚು ವೆಚ್ಚ ಪರಿಶೀಲನೆ ಮಾಡಿ ದುಡಿಮೆಗೆ ತಕ್ಕ ಒಂದು ಒಳ್ಳೆಯ ಲಾಭದಾಯಕ ಬೆಲೆ ಘೋಷಣೆ ಮಾಡಬೇಕು, ಸರ್ಕಾರ ಘೋಷಣೆ ಮಾಡಿದ ಬೆಲೆಗಿಂತ ಕಡಿಮೆ ಬೆಲೆಗೆ ಕಡಿಮೆ ಕೊಂಡುಕೊಳ್ಳದಂತೆ ನಿಯಮ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಿ ಆಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿ ಜಿ ಪಾಟೀಲ ಅಧ್ಯಕ್ಷರು ಭಾರತೀಯ ಕಿಶಾನ್ ಸಂಘ ರೋಣ ತಾಲೂಕ, ಬಿ ಎ ಅವಾರಿ, ಎಂ ಎಸ್ ಉದ್ದುರೂ, ಎಸ್ ಕೆ ಕಾಜಗಾರ್, ವಿ ಎಂ ಪಾಟೀಲ, ಎಂ ಸಿ ಅವಾರಿ.