ಸಂದಿಗವಾಡ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಉತ್ತರಪ್ರಭ ಸುದ್ದಿ

ರೋಣ: ತಾಲೂಕಿನ ಸಂದಿಗವಾಡ ಬಳಿ ಬಸ್ ಹರಿದು ಬೈಕ್ ಸವಾರನ ಸಾವು. ನವಲಗುಂದದ ಕಡೆಯಿಂದ ರೋಣ ಕಡೆಗೆ ಬರುವ ಕೆ ಎಸ್ ಆರ್ ಟಿ ಸಿ ಬಸ್ ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾತ್ರಿ ಸುಮಾರು 7 ಘಂಟೆಗೆ ನಡೆದಿದೆ, ಮೃತ ವ್ಯಕ್ತಿ ನವಲಗುಂದ ತಾಲೂಕಿನ  ನಾಯಕನೂರ ಗ್ರಾಮದ ಮೈಲಾರಪ್ಪ ಮಾದರ ಎಂದು ತಿಳಿದು ಬಂದಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version