ಉತ್ತರಪ್ರಭ
ರೋಣ:
ರೋಣ ಬಸ್ ನಿಲ್ದಾಣದಲ್ಲಿ ಬಾಗಲಕೋಟೆ ಘಟಕಕ್ಕೆ ಒಳಪಟ್ಟ ಬಸ್ ಹೈಕೋರ್ಟ್ ಆದೇಶದ ಮೇರೆಗೆ ವಶಕ್ಕೆ ಪಡೆದು ಕೊಂಡ ಘಟನೆ ಬುಧವಾರ ನಡೆದಿದೆ.

ಬಾಗಲಕೋಟೆ ಘಟಕದ ಬಸ್ ಚೊಳಚಗೊಡ್ಡದ ಕ್ರಾಸ್ ಬಳಿ 2014ರಲ್ಲಿ ಅಪಘಾತ ಸಂಭವಿಸಿ ನಾಲ್ಕು ಜನ ಮರಣ ಹೊಂದಿದ್ದರು, ಅವರಲ್ಲಿ ಇಬ್ಬರು ಮೃತರ ಸಂಬಂಧಿಕರು. ರೋಣ ಕೋರ್ಟಿನಲ್ಲಿ ಧಾವೆ ಹುಡಲಾಗಿ ಹೈಕೋರ್ಟ್, ಮೃತರ ಸಬಂಧಿಕರಿಗೆ ಅಸಲು, ಬಡ್ಡಿ ಸೇರಿ ಸುಮಾರು ಇಪತ್ತೊಂದು ಲಕ್ಷ ಪರಿಹಾರ ನೀಡಲು ಆದೇಶ ಮಾಡಿತ್ತು ,ಆದರೂ ಕೂಡಾ ಬಾಗಲಕೋಟೆ ಘಟಕ ಬರೀ ಹನ್ನೊಂದು ಲಕ್ಷ ಮಾತ್ರ ಪರಿಹಾರ ನೀಡಿ ಇನ್ನುಳಿದ ಹಣ ನೀಡಲು ಸತಾಯಿಸುತ್ತಿರುವ ಕಾರಣ. ಹಿರಿಯ ನ್ಯಾಯಾಧೀಶರ ಆದೇಶದ ಮೇರೆಗೆ ಈ ಬಸ್ಸನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಮೃತರ ವಾದಿಪರ ವಕೀಲ ಬಿ ಎಚ್ ಮಾಡಲಗೇರಿ ಹೇಳಿದರು.

ಈ ಸಂದರ್ಭದಲ್ಲಿ ಏನ್ ಪಿ ನದಾಫ್, ಎಸ್ ಈ ಕಾಳೆ , ಬಿ ಎಂ ಯಲಬುರ್ಗಿ ಧಿಲಿಪರು(ಅಮೀನರು ) ಉಪಸ್ಥಿತರಿದ್ದರು.

2 comments
Leave a Reply

Your email address will not be published. Required fields are marked *

You May Also Like

ನಾಳೆ ಗದಗಿಗೆ ಬರಲಿದೆ ಮುಂಬೈ ಎಕ್ಸಪ್ರೆಸ್

ಗದಗ: ನಾಳೆ ಗದಗ ನಗರಕ್ಕೆ ಮುಂಬೈ-ಗದಗ ಎಕ್ಸ್‌ಪ್ರೆಸ್‌ ರೈಲು ಆಗಮಿಸಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ…

ಗದಗ ಜಿಲ್ಲೆಯಲ್ಲಿಂದು 39 ಪಾಸಿಟಿವ್ : ಸೋಂಕಿನ ಮಿಂಚಿನ ಓಟ!

ಜಿಲ್ಲೆಯಲ್ಲಿಂದು 39 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 194.

ರೆಮ್ ಡೆಸಿವರ್ ಈಗ 800 ಮೆಟ್ರಿಕ್ ಟನ್ ಹೆಚ್ಚಿಸಿದ ಕೇಂದ್ರ ಸರ್ಕಾರ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವಿ ಸ್ಪಂದಿಸಿದ ಪ್ರಾಧನಿ ನರೇಂದ್ರ ಮೋದಿ ಅವರು ಒಂದೇ ದಿನದಲ್ಲಿ ರಾಜ್ಯಕ್ಕೆ ರೆಮ್ ಡೆಸವಿರ್ ಹಂಚಿಕೆಯನ್ನು 800 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ .ಕೆ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಪೋಷ್ಟ ಮಾಡಿದ್ದಾರೆ.

ಮದುವೆ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳು ನಿಷೇಧಿಸಿದ ಜಿಲ್ಲಾಡಳಿತ

ಬಾಗಲಕೋಟೆ:ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಮದುವೆ ತುರ್ತು ನಡೆಸಲೇ ಬೇಕಿದ್ದರೆ…