ಲಕ್ಷ್ಮೇಶ್ವರ: ತಾಲ್ಲೂಕು ಪಂಚಾಯತ ಲಕ್ಷ್ಮೇಶ್ವರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಎಲ್ಲ ಹದಿನಾಲ್ಕು ಗ್ರಾಮ ಪಂಚಾಯತಿಗಳಲ್ಲಿ ಆದ್ಯತಾ ಕುಟುಂಬಕ್ಕೆ ಕೊವಿಡ್ ಲಸಿಕೆ ಹಾಕುವ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ನಿಗದಿಪಡಿಸಿದ ಕೊವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಆದ್ಯತಾ ವಲಯದವರಿಗೆ ಲಸಿಕೆ ನೀಡಲಾಗುತ್ತದೆ ಹಾಗೂ ಮಧುಮೇಹ ಹಾಗೂ ಅಧಿಕ/ಕಡಿಮೆ ರಕ್ತದೊತ್ತಡ ಇರುವಂತವರಿಗೆ RAT ಪರೀಕ್ಷೆ ಕೂಡಾ ಮಾಡಲಾಗುತ್ತದೆ ಎಂದು ತಾಲೂಕು ಪಂಚಾಯತಿ ಇಒ ಆರ್.ವೈ .ಗುರಿಕಾರ ತಿಳಿಸಿದರು.