ವಯಸ್ಸಿನ ಕಾರಣದಿಂದ ಸಿಎಂ ಬಿಎಸ್ವೈ ಅವರನ್ನು ಕೆಳಗಿಳಿಸುವುದು ಸೂಕ್ತ ಅಲ್ಲ: ಸಚಿವ ಪ್ರಹ್ಲಾದ್ ಜೋಷಿ

ಹುಬ್ಬಳ್ಳಿ: ಸಿಎಂ ಯಡಿಯೂರಪ್ಪ ಸಮರ್ಥರಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ‌ ಇಲ್ಲ. ಯಡಿಯೂರಪ್ಪ ನವರು ಒಳ್ಳೆಯ ಕೆಲಸ‌ ಮಾಡುತ್ತಿದ್ದಾರೆ. ವಯಸ್ಸಿನ ಕಾರಣ ಹೇಳಿ‌ ಅವರನ್ನು ಕೆಳಗಿಳಿಸುವುದು ಸೂಕ್ತವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿದರು.
ಅವರು ಈ ಕುರಿತು ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಸಮರ್ಥರು ಇದ್ದಾರೋ‌ ಇಲ್ಲೊ ಅನ್ನೊದಕ್ಕಿಂತ, ಇದ್ದವರು ಸಮರ್ಥರಿದ್ದಾರೋ ಇಲ್ಲವೊ, ಅವರನ್ನು ಮುಂದುವರೆಸಬೇಕೋ, ಬೇಡವೋ ಎನ್ನುವ ಪ್ರಶ್ನೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಕಾಂಗ್ರೆಸ್ ನಲ್ಲಿ ಸಮರ್ಥರ ಸಂಖ್ಯೆ ಜಾಸ್ತಿ‌ ಇದೆ. ಅದಕ್ಕೆ ಅವರು ಬಡಿದಾಡುತ್ತಿದ್ದಾರೆ. ಅವರು ಬಡಿದಾಡುತ್ತಲೇ ಇರಲಿ ಎಂದು ವ್ಯಂಗ್ಯವಾಡಿದರು.
ನಮ್ಮ ಆದ್ಯತೆ, ಏನೇ ಇದ್ದರು ಕೊರೊನಾ ನಿಯಂತ್ರಿಸುವುದು.
ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ನಾನು ಕೇಂದ್ರ ಸಚಿವನಾಗಿರುವುದರಿಂದ ರಾಜ್ಯದ ಹಲವಾರು ಜನ ಭೇಟಿಯಾಗ್ತಾರೆ. ಕೇಂದ್ರದಿಂದ ಆಗಬೇಕಿರುವ ಕೆಲಸದ ಬಗ್ಗೆ ಕೇಳಿಕೊಂಡು ಬರ್ತಾರೆ ಎಂದರು.

Exit mobile version