ನರೇಗಲ್, ಹೊಳೆಯಾಲೂರು ಹೋಬಳಿ: ರೈತರಿಂದ ತಾಡಪತ್ರಿಗೆ ಅರ್ಜಿ ಆಹ್ವಾನ

ನರೇಗಲ್: ಕೃಷಿ ಇಲಾಖೆಯಿಂದ ನರೇಗಲ್ ಹಾಗೂ ಹೊಳೆಆಲೂರ ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಲಾಟರಿ ಮುಖಾಂತರ ತಾಡಪತ್ರಿಗಳನ್ನು ವಿತರಿಸಲು ಅರ್ಜಿ ಕರೆಯಲಾಗಿದೆ.

ತಾಡಪತ್ರಿ ಪಡೆಯಲಿಚ್ಚಿಸುವವರು ರೈತರು ಆಧಾರಕಾರ್ಡ್, ಜಮೀನಿನ ಪಹಣಿ, ಬ್ಯಾಂಕ್ ಪಾಸ್ಬುಕ್ ಹಾಗೂ ಜಾತಿ ಪ್ರಮಾಣ ಪತ್ರ (ಪ.ಜಾ/ಪ.ಪಂಕ್ಕೆ ಮಾತ್ರ) ಗಳ ಝರಾಕ್ಸ್ ಪ್ರತಿಯೊಂದಿಗೆ ಎಪ್ರಿಲ್ 30ರ ಒಳಗೆ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಈ ಹಿಂದಿನ ಮೂರು ವರ್ಷಗಳಲ್ಲಿ ಪಾಡಪತ್ರಿಗಳನ್ನು ಪಡೆದ ಫಲಾನುಭವಿಗಳು ಅರ್ಜಿ ಹಾಕಿದರು ಪರಿಗಣಿಸಲಾಗುವುದಿಲ್ಲ ಎಂದು ತಾಲ್ಲೂಕಾ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಪ್ರಭ ಬಳಗಕ್ಕೆ ಗ್ರಾಮ ಪಂಚಾಯತಿಗೊಬ್ಬ ಪ್ರತಿನಿಧಿ ಬೇಕಾಗಿದ್ದಾರೆ.

Exit mobile version