ಎಸಿಬಿ ಬಲೆಗೆ ಗದಗ ಕಾರ್ಮಿಕ ನಿರೀಕ್ಷಕಿ

ಗದಗ: ಕಾರ್ಮಿಕ ಇಲಾಖೆ ಮೇಲೆ ಬುಧವಾರ ಎಸಿಬಿ ದಾಳಿ ನಡೆಸಿದ್ದು, ಕಾರ್ಮಿಕ ಇಲಾಖೆ ನಿರೀಕ್ಷಕಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಲಂಚ ಪಡೆಯುವಾಗ ಕಾರ್ಮಿಕ ನಿರೀಕ್ಷಕಿ ಅನುರಾಧಾ ಎಸಿಬಿ ಬಲೆಗೆ ಬಿದ್ದಿದ್ದಾರೆ. ಲೈಸೆನ್ಸ್ ನೀಡಲು 2500 ಲಂಚ ಬೇಡಿಕೆ ಇಟ್ಟ ಕಾರಣ ಮಾಬುಸಾಬ್ ಎಂಬುವರಿಂದ 2500 ಲಂಚ ಪಡೆಯವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ವಾಸುದೇವ ರಾಮ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

Exit mobile version