ಲಕ್ಷ್ಮೇಶ್ವರ: ಪಟ್ಟಣ ತೋಟಗಾರಿಕಾ ಇಲಾಖೆಯ ಮಹಾಂತಿನಮಠದಲ್ಲಿ ಬುದವಾರ ತೋಟಗಾರಿಕಾ ಇಲಾಖೆ ವತಿಯಿಂದ ತಾಲೂಕ ಪಂಚಾಯತಿ ಯೋಜನೆಯಡಿ ರೈತ ಮತ್ತು ರೈತ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ ಬುಧವಾರ ಜರುಗಿತು.
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯ ಎಸ್.ಪಿ.ಬಳಿಗಾರ, ರೈತರು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೃಷಿಯಿಂದ ವಿಮೆ ಮುಕ್ತ ಆಗುತ್ತಿದ್ದ ರೈತರಿಗೆ ತೋಟಗಾರಿಕಾ ಕ್ಷೇತ್ರ ಹೊಸ ಆಯಾಮ ನೀಡಿದ್ದು ರೈತರು ಆದುನಿಕ ತಂತ್ರಜ್ಞಾನ ಬಳಸಿಕೊಂಡು ಆದಾಯ ಹೆಚ್ಚಿಸಕೊಳ್ಳಬೇಕು. ಇಂದು ಅನ್ನದಾತ ಪರಿಶ್ರಮದಿಂದಲ್ಲೆ ಬದುಕಿದ್ದು ಸರಕಾರ ಅವರಿಗೆ ಸಾಕಷ್ಟು ಯೋಜನೆಗಳನ್ನು ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸ್ವಾವಲಂಭನೆ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ, ಬಸವರಾಜ ಬೆಂಡಿಗೇರಿ ಮಾತನಾಡಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಪುರಸಭಾ ಅಧಕ್ಷ ಪೂರ್ಣಿಮಾ ಪಾಟೀಲ್, ಮಲ್ಲೇಶಪ್ಪ ಲಮಾಣಿ, ಚನ್ನಪ್ಪ ಜಗಲಿ, ಬಸಣ್ಣ ಮೆಣಸಿನಕಾಯಿಪಾಟೀಲ್ ಸೇರಿದಂತೆ ಅನೇಕರು ಇದ್ದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ತೋಟಗಾರಿಕಾ ಬೆಳೆಗಾರರ ಪ್ರಶಸ್ತಿ ಪಡೆದ ಹನಮಂತಪ್ಪ ಸಾಲಿ, ಬಸವರಾಜ ನಾವಿ ಇವರನ್ನು ಸನ್ಮಾನಿಸಲಾಯಿತು.
ಎಂ.ಐ.ನಧಾಪ ಮತ್ತು ಪಾಟೀಲ್ ನಿರ್ವಹಿಸಿದರು.