ಮಗಳ ಬದುಕು ಸರಿ ಮಾಡಲು ಬಂದ ಅತ್ತೆಯ ಮೇಲೆಯೇ ಕಲ್ಲು ಹಾಕಿದ ವ್ಯಕ್ತಿ!

ಕಲಬುರಗಿ : ಪತ್ನಿಯ ವಿಷಯದಲ್ಲಿ ನಡೆದ ಗಲಾಟೆ ಅತ್ತೆಯ ಸಾವಿನಲ್ಲಿ ಅಂತ್ಯವಾಗಿದೆ.

ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಿಬಾಯಿ(45) ಕೊಲೆಯಾದ ಮಹಿಳೆ. ಆರೋಪಿ ರಾಮು(55) ಅತ್ತೆಯ ತಲೆ ಮೇಲೆಯೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ರಾಮು ಹಾಗೂ ಆತನ ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಹಲವು ದಿನಗಳಿಂದ ಪತ್ನಿ, ತವರು ಮನೆ ಸೇರಿದ್ದಳು. ಹೀಗಾಗಿ ಅತ್ತೆ ಜಗಳ ಬಗೆ ಹರಿಸುತ್ತೇನೆ ಎಂದು ಮಗಳನ್ನು ಅಳಿಯನ ಮನೆಗೆ ಕರೆದುಕೊಂಡು ಬಂದಿದ್ದರು.

ಆದರೆ ಈ ಸಂದರ್ಭದಲ್ಲಿ ಅಳಿಯ ಹಾಗೂ ಅತ್ತೆಯ ಮಧ್ಯೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ರಾಮು ತನ್ನ ಅತ್ತೆ ಲಕ್ಷ್ಮಿಬಾಯಿ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಿಂದ ಭೀಮನಾಳ ಗ್ರಾಮಕ್ಕೆ ಮಗಳನ್ನು ಕಳುಹಿಸಲು ಲಕ್ಷ್ಮಿಬಾಯಿ ಬಂದಿದ್ದಳು. ಈ ವೇಳೆ ದುರ್ಘಟನೆ ಸಂಭವಿಸಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Exit mobile version