ದೇಹ ಮಾರುವುದಕ್ಕಾಗಿ ಕರೆ ತಂದಿದ್ದ ಅಪ್ರಾಪ್ತೆಯರನ್ನು ರಕ್ಷಿಸಿದ ಪೊಲೀಸರು!

ಜೈಪುರ : ಅಪ್ರಾಪ್ತ ಬಾಲಕಿಯರನ್ನು ದೇಹ ವ್ಯಾಪಾರಕ್ಕೆಂದು ಕರೆ ತಂದಿದ್ದ ತಂಡದ ಮೇಲೆ ಪೊಲೀಸರು ದಾಳಿ ನಡೆಸಿದ್ದು, 21 ಅಪ್ರಾಪ್ತೆಯರನ್ನು ರಕ್ಷಿಸಿದ್ದಾರೆ.

ಈ ಘಟನೆ ದೋಲ್ಪುರ ಜಿಲ್ಲೆಯ ಧೀಮರಿ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಜಿಲ್ಲಾ ವರಿಷ್ಠಾಧಿಕಾರಿ ಅವರು ಮಹಿಳಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕುರಿತು ಮಹಿಳಾ ಸಿಬ್ಬಂದಿ ಮಾರುವೇಷದಲ್ಲಿ ಗ್ರಾಮದ ಜನರೊಂದಿಗೆ ಮಾತನಾಡಿ ಹಲವು ಮಾಹಿತಿ ಪಡೆದುಕೊಳ್ಳುತ್ತಿರುವಾಗ ಈ ವಿಷಯ ಬಹಿರಂಗವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಎಸ್ಪಿ ಕೇಸರ್ ಸಿಂಗ್ ಅವರು ದಾಳಿ ನಡೆಸಿದ್ದರು.

ದಾಳಿಯಲ್ಲಿ 21 ಅಪ್ರಾಪ್ತೆಯರನ್ನು ರಕ್ಷಿಸಿದ್ದಾರೆ. ಎಲ್ಲರನ್ನು ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿದ್ದು, ಸೋಮವಾರ ಬಾಲಕಿಯರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೇಸರ್ ಸಿಂಗ್ ಹೇಳಿದ್ದಾರೆ.

Exit mobile version