ಬೆಂಗಳೂರು : ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಈ ಸಂದರ್ಭದಲ್ಲಿ ಮಾಡಿದರೆ ಸಮಾಜಕ್ಕೆ ಬೇರೆ ಸಂದೇಶ ರವಾಣೆ ಮಾಡಿದಂತಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಖಾತೆ ಬದಲಾವಣೆ ಕುರಿತು ಶ್ರೀರಾಮುಲು ಅವರು ನಿನ್ನೆ ರಾತ್ರಿಯೇ ಸಿಎಂ ಅವರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದಾರೆ. ಆದರೆ, ಶ್ರೀರಾಮುಲು ಅವರಿಗೆ ಬೆಳಿಗ್ಗೆ ಬಂದು ಭೇಟಿ ಮಾಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಖಾತೆ ಬದಲವಾಣೆ ಮಾಡಿದರೆ, ಕೊರೊನಾ ನಿರ್ವಹಣೆ ವಿಷಯದಲ್ಲಿ ವಿಫರಾಗಿದ್ದಕ್ಕೆ ಖಾತೆ ಬದಲವಾಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಹೀಗಾಗಿ ಖಾತೆ ಬದಲಾವಣೆ ಬೇಡ. ಸ್ವಲ್ಪ ಸಮಯ ನನಗೆ ಕೊಟ್ಟರೆ, ನಾನೇ ಈ ಖಾತೆ ಬಿಟ್ಟು ಬರುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಸಿಎಂ ಅವರನ್ನು ಭೇಟಿ ಮಾಡಲಿರುವ ಶ್ರೀರಾಮುಲು ಅವರು ಖಾತೆ ಬಿಟ್ಟು ಕೊಡುತ್ತಾರೆಯೇ? ಆ ಖಾತೆಯನ್ನು ಮತ್ತೆ ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಾರೆಯೇ ಕಾಯ್ದು ನೋಡಬೇಕಿದೆ.