ತೋಳದ ದಾಳಿಗೆ 15 ಕುರಿಗಳು ಬಲಿ

ಶಿರಹಟ್ಟಿ: ತಾಲೂಕಿನ ಮಾಚೇನಹಳ್ಳಿ ಗ್ರಾಮದ ಹೊರವಲಯದಲ್ಲಿದ್ದ ಕುರಿ ಹಿಂಡಿಗೆ ಶನಿವಾರ ರಾತ್ರಿ ತೋಳವೊಂದು ದಾಳಿ ಮಾಡಿದ ಘಟನೆ ಜರುಗಿದೆ.
ಕುರಿಗಾಹಿ ಬಸಪ್ಪ ಪೂಜಾರ ಎಂಬುವರು ಗ್ರಾಮದ ಹೊರವಲಯದಲ್ಲಿ ಕುರಿಹಟ್ಟಿ ಹಾಕಿದ್ದು, ರಾತ್ರಿ ವೇಳೆಯಲ್ಲಿ ತೋಳ ಕುರಿಗಳ ಮೇಲೆ ದಾಳಿ ಮಾಡಿ 13 ಕುರಿಮರಿ ಹಾಗೂ 2 ದೊಡ್ಡ ಕುರಿಗಳನ್ನು ಕೊಂದು ಹಾಕಿದೆ. ಪಾಪ ಹೊಟ್ಟೆಪಾಡಿಗಾಗಿ ಜೀವನ ನಡೆಸುತ್ತಿದ್ದ ಬಡಪಾಯಿಗೆ ಕುರಿಗಾಹಿಯ ಕುರಿಗಳ ಮೇಲಿನ ದಾಳಿ ವಿಷಯ ತಿಳಿಯುತ್ತಿದ್ದಂತಯೇ ಅರಣ್ಯ ಇಲಾಖೆ ಹಾಗೂ ಪಶುಸಂಗೋಪನ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Exit mobile version