ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 9 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.
ಶಿರಹಟ್ಟಿ ತಾಲೂಕು ಮಜ್ಜೂರ ಗ್ರಾಮ ಪಂಚಾಯತ್ ವಾರ್ಡ ನಂ. 1 ಶಿವಾಜಿನಗರ; ಶಿರಹಟ್ಟಿ ತಾಲೂಕ ವರವಿ ಗ್ರಾಮ. ಮುಂಡರಗಿ ಟಿಎಂಸಿಯ ವಾರ್ಡ ನಂ. 18 ವಿದ್ಯಾನಗರ ; ಮುಂಡರಗಿ ಟಿಎಂಸಿಯ ವಾರ್ಡ ನಂ.7 , ಹುಡಕೋ ಕಾಲನಿ ; ಮುಂಡರಗಿ ಟಿಎಂಸಿಯ ವಾರ್ಡ ನಂ. 06; ಬಸವೇಶ್ವರ ನಗರ; ಮುಂಡರಗಿ ಟಿಎಂಸಿ ವಾರ್ಡ ನಂ. 17 ಉಪ್ಪಿನಬೆಟಗೇರಿ ; ಮುಂಡರಗಿ ಟಿಎಂಸಿ ವಾರ್ಡ ನಂ. 19, ಪಿಡಬ್ಲುಡಿ ಕ್ವಾರ್ಟರ್ಸ ; ಮುಂಡರಗಿ ಟಿಎಂಸಿ ವಾರ್ಡ ನಂ.14 , ಗರಡಿಮನಿ ಓಣಿ ; ಮುಂಡರಗಿ ತಾಲೂಕು ಡಂಬಳ ಗ್ರಾಮ ಪಂಚಾಯತ್ ವಾರ್ಡ ನಂ. 01 .
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವರದಿಯನ್ವಯ ಈ 09 ಪ್ರದೇಶಗಳನ್ನು ಕೊವಿಡ್-19 ಸೋಂಕು ನಿಯಂತ್ರಣ ಪ್ರತಿಬಂಧಿತ (ಕಂಟೇನ್ಮೆಂಟ್) ಪ್ರದೇಶಗಳೆಂದು ಘೋಷಿಸಿರುವುದನ್ನು ಹಿಂಪಡೆದು ಸಾಮಾನ್ಯ ವಲಯವಾಗಿ ಬದಲಾವಣೆಗೊಳಿಸಿ ಗದಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.