ಬಾಗಲಕೋಟೆ: ನಗರದ ರೋಟರಿ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಇಂದು ಹಿರಿಯ ಪತ್ರಕ ರ್ತರಾದ ಪ್ರಕಾಶ ಬಾಳಕ್ಕನವರ ಹಾಗೂ ಮಹೇಶ ಅಂಗಡಿ ಅವರನ್ನು ಸನ್ಮಾನಿಸಿತು.
ವಿದ್ಯಾಗಿರಿಯ “ಸಂಜೆ ದರ್ಶನ” ಪತ್ರಿಕಾ ಕಾರ್ಯಾಲ ಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಇಬ್ಬರನ್ನು ರೋಟರಿ ಕ್ಲಬ್ನ ನೂತನ ಅಧ್ಯಕ್ಷ ಸಿ.ಎಚ್.ಕಟಗೇರಿ, ಕಾರ್ಯದರ್ಶಿ ಸೋಮು ಪರಾಂಡೆ, ಖಜಾಂಚಿ ಮಲ್ಲಿಕಾರ್ಜುನ ಹದ್ಲಿ ಅವರುಗಳು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ನಿರ್ದೇಶಕರಾದ ಆರ್.ಎಂ.ಜಡಿಮಠ, ಪ್ರಲ್ಹಾದ ಹುಯಿಲಗೋಳ, ಸಂತೋಷ ಪಾಟೀಲ, ಸುರೇಂದ್ರಕುಮಾರ್, ವಿಶ್ವನಾಥ ವೈಜಾಪೂರ, ಸಂತೋಷ ನಾವಲಗಿ, ಜಗದೀಶ ಪಾಟೀಲ, ಸಂತೋಷ ಮುರನಾಳ ಪಾಲ್ಗೊಂಡಿದ್ದರು.