ಪ್ರತಿ ವರ್ಷವೂ ಕಾರ ಹುಣ್ಣಿಮೆ ಆಗಮಿಸಿತೆಂದರೆ ಅದು ಮುಂಗಾರಿನ ನಾಂದಿ ಎಂತಲೇ ಅರ್ಥ. ಈ ಕಾರ ಪದದ ಅರ್ಥ, ಸುರಿ,ಚೆಲ್ಲು,ಬಿಳು ಎಂಬುದಾಗಿದೆ .ಎಂದರೆ ಇನ್ನು ಮುಂದೆ ರೈತರು ಬೆಳೆಯುವ ಬೆಳೆಗೆ ಮಳೆ ಸರಿಯಾಗಿ ಬಿಳಿಲಿ ಎಂದು ಪೂಜಿಸುವ ಒಂದು ಹಬ್ಬವೂ ಸರಿಯೇ.ಹಾಗೇ ನಮ್ಮಲ್ಲಿ ಈ ಹಬ್ಬದ ಮುಂಗಡ ದಿನವನ್ನು ” ಹೊನ್ನುಗ್ಗಿ” ಎಂದು ಆಚರಿಸುವರು .ಅಂದಿನ ದಿನ ರೈತರ ಮನೆಯಲ್ಲಿನ ಕುಂಟಿ ,ಕುರಿಗೆ ,ಬಾರುಕೋಲು ,ಮೊದಲಾದ ರೈತಾಪಿ ಸಾಮಗ್ರಿಗಳನ್ನು ಕ್ಯಾವಿಯಿಂದ ಸಾರಿಸಿ ಅಲಂಕರಿಸಿ ಪೂಜಿಸುವ ವಾಡಿಕೆಯುಂಟು.

ಕಾರ ಹುಣ್ಣಿಮೆ ವಿಶೇಷ:…….ಕಾರ ಹುಣ್ಣಮೆಯಂದು ಎಲ್ಲರೂ ಎತ್ತುಗಳನ್ನು ಸ್ನಾನ ಮಾಡಿಸಿ ಅವುಗಳ ಕೊಂಬಿಗೆ ಗೆಜ್ಜೆ ,ಕೊಂಬನಸು,ರಿಬ್ಬನ್,ಮತ್ತು ಬಣ್ಣಗಳನ್ನು ಬಳಸಿ ಅಲಂಕರಿಸಿ, ಹಣಿಪಟ್ಟಿ ಜೂಲಾಗಳನ್ನು ಹಾಕಿ ಮದುಮಗನಂತೆ ಶೃಂಗರಿಸುತ್ತಾರೆ .ಹಾಗೇಆ ದಿನ ಸಂಜೆ ಊರ ಅಗಸಿಯಲ್ಲಿ ಊರವರೆಲ್ಲ ಸೇರಿರುತ್ತಾರೆ ಎರಡೂ ಕಡೆ ಅಗಸಿಗಳಲ್ಲಿ ಉದ್ದನೆಯ ಬೊಂಬುಗಳಿಗೆ ಬೆವಿನೆಲೆಗಳನ್ನು ಕಟ್ಟಿ ಆಚೆ ಈಚೆ ಹಿಡಿದು ನಿಂತಿರುತ್ತಾರೆ.ಶೃಂಗರಿಸಿದ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಓಡಿಸುತ್ತಾರೆ.ಯಾವ ಎತ್ತು ತನ್ನ ಕೊಂಬಿನ ಸಹಾಯದಿಂದ ಆ ಬೆವಿನೆಲೆಗಳನ್ನು ಕಟ್ಟಿದ ಹಗ್ಗವನ್ನು ತಿವಿದು ಹರಿಯುತ್ತದೆಯೋ ಆ ಎತ್ತು ವಿಜಯಶಾಲಿ.ಆಗ ಯಾವ ಬಣ್ಣದ ಎತ್ತು (ಅಂದರೆ ಬಿಳಿ ಎತ್ತು,ಕರಿ ಎತ್ತು,ಕಂದು ಬಣ್ಣದ ಎತ್ತು )ಹಗ್ಗವನ್ನು ಹರಿಯುತ್ತದೆಯೋ ಅದರ ಆಧಾರದ ಮೇಲೆ ಆ ವರ್ಷದ ಬೆಳೆಗಳು ಮತ್ತೆ ಮಳೆಗಳನ್ನು ನಿರ್ಧರಿಸುತ್ತಾರೆ.ಹೀಗೆ ಕಾರ ಹುಣ್ಣಿಮೆ ಎಂಬುದು ರೈತರ ಹರುಷವನ್ನು ಇಮ್ಮಡಿಗೊಳಿಸುವ ಮುಂಗಾರಿನ ಮುನ್ನುಡಿಯ ಹಬ್ಬವೆಂದೇ ಹೇಳಬಹುದು.

ಈ ಹರುಷದ ನಾಂದಿಗೆ ಪೌರಾಣಿಕವಾದ ಒಂದು ಸಂಗತಿಯೂ ಇದೆ ಅದೆನೆಂದರೆ:— ಹಿಂದೆ ಸಮುದ್ರ ಮಂಥನದ ಸಮಯದಲ್ಲಿ ಸುರ ಅಸುರರು ಅಮೃತಕ್ಕಾಗಿ ಪರಿಶ್ರಮಿಸುವ ಸಂದರ್ಭದಲ್ಲಿ ಇತ್ತ ರಾಕ್ಷಸಿಯೊಬ್ಬಳೂ ಈಡೀ ವಿಶ್ವಕ್ಕೆ ಕಾಟ ಕೊಡುತ್ತಿದ್ದಳಂತೆ ಆಗ ಜಗದೀಶ್ವರನು ತನ್ನ ಮಗ ನಂದಿಗೆ ಅವಳನ್ನು ಸಂಹರಿಸುವಂತೆ ಆಜ್ಞೆಯನ್ನು ಮಾಡಿದನಂತೆ ಆಗ ನಂದಿಯು ತನ್ನ ಕೊಂಬಿನಿಂದ ಚುಚ್ಚಿ ಆ ರಕ್ಕಸಳನ್ನು ಸಂಹರಿಸಿ ಜನರಿಗೆ ನೆಮ್ಮದಿಯ ಔತನವನ್ನುನಬಡಿಸಿದನಂತೆ.ನಂದಿಯ ಆ ವಿಜಯದ ಸಂಕೇತವಾಗಿಯೂ ಕೂಡಾ ನಂದಿಗಳನ್ನು ಶೃಂಗರಿಸಿ ಪೂಜಿಸುವುದುಂಟು ಎಂಬುದು ಪೌರಾಣಿಕ ಹಿನ್ನೆಲೆ.

ಲೇಖನ: ಚೈತ್ರ ಎಲ್ ಯಾಳಗಿ, ಕೊತಬಾಳ(ಗದಗ)

ಹೀಗೆ ಪ್ರತಿ ವರ್ಷವೂ ಕಾರ ಹುಣ್ಣಿಮೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಸೊಬಗಿನಿಂದ ಆಚರಿಸುವರು.ಇದು ಭೂ ತಾಯಿಗೆ ಪೂಜೆ ಸಲ್ಲಿಸುವ ಹಬ್ಬವೂ ಹೌದು.ಮುಂಗಾರಿನಲ್ಲಿ ಸುರಿದ ಮಳೆಯಿಂದ ಇಳೆಗೆ ತಂಪು ತಗುಲಿ ಬೆಳೆಗಳ ಬೆಳೆಗೆ ಬೀಜಗಳನ್ನು ಬಿತ್ತಲು ಹರುಷದಿ ಸಾಗುವ ಮುನ್ನ ಬೇಳೆಯ ಬೆಳೆಯಲು ಹೆಗಲು ಕೊಡುವ ಆ ಜೀವಗಳಿಗೆ(ಎತ್ತುಗಳಿಗೆ) ಪೂಜಿಸುವ ಸುಸಮಯವಿದು. ಈ ಕಾರ ಹುಣ್ಣಿಮೆ ಈಡೇ ಜಗತ್ತನ್ನೆ ಕೊರೋನಾ ಮುಕ್ತವನ್ನಾಗಿಸಿ ರೈತರು ಬೆಳೆದ ಬೆಳೆಗಳೆಲ್ಲಾ ಹಣ್ಣಾಗಿ ಹೊನ್ನಾಗಿ ರೈತರ ಬಾಳು ಬೆಳಗಲಿ.

1 comment
Leave a Reply

Your email address will not be published. Required fields are marked *

You May Also Like

ಮುಶಿಗೇರಿ: ನಾಗನಗೌಡ ಗೌಡರ ರಾಜ್ಯಕ್ಕೆ 2ನೇ ರ್ಯಾಂ ಕ್ ಪಡೆದು ಸೈಂಟಿಫಿಕ್ ಆಪೀಸರ್ ಹುದ್ದೆಗೆ ಆಯ್ಕೆ

ಗದಗ: ಪೊಲೀಸ್ ಇಲಾಖೆ ವತಿಯಿಂದ ಕಳೆದ ವರ್ಷ 28.05.2021 ರಂದು  ವಿಧಿವಿಜ್ಞಾನ  ಪ್ರಯೋಗಾಲಯ ವಿಭಾಗದಲ್ಲಿ  84…

ರಾಜ್ಯದಲ್ಲಿ ಹೆಚ್ಚುತ್ತಿದೆ ಶೀತ ಜ್ವರ ಸೋಂಕಿತರ ಸಂಖ್ಯೆ: ಗದಗ,ಕೊಪ್ಪಳ,ಧಾರವಾಡ ಸೇರಿ ಹಲವು ಜಿಲ್ಲೆಯಲ್ಲೂ ಸಮೀಕ್ಷೆ..!

ಬೆಂಗಳೂರು : ರಾಜ್ಯದಲ್ಲಿ ಶೀತ ಜ್ವರ ಸೋಂಕಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವ…

ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜೂನ್ 14ರ ವರೆಗೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಜಾರಿ

ಗದಗ: ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಪ್ರಕಟಿಸಿದ ಮಾರ್ಗಸೂಚಿಗಳು ಜೂನ್ 7ರ ಬೆಳಗ್ಗೆ 6 ಗಂಟೆಯಿoದ ಜೂನ್ 14ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿವೆ. ಈ ಅವಧಿಯಲ್ಲಿ ಯಾವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ನಿರ್ಬಂಧಿಸಲಾಗಿದೆ ಎಂಬ ಮಾಹಿತಿಯು ಈ ಕೆಳಕಂಡoತಿದೆ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮಾರ್ಗಸೂಚಿಗಳ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುoದರೇಶ್ ಬಾಬು ತಿಳಿಸಿದ್ದಾರೆ.

ಗುತ್ತಿಗೆ ದಾರನಿಂದ ಕಳಪೆ ಕಾಮಗಾರಿ-ಗ್ರಾಮಸ್ಥರ ಆಕ್ರೋಶ

ಲಕ್ಷ್ಮೇಶ್ವರ: ಉತ್ತಮ ರಸ್ತೆ ನಿರ್ಮಾಣಕ್ಕೆಂದು ಸರಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇ. ಆದ್ರೆ, ಗುತ್ತಿಗೆದಾರರು…