ಯಾದಗಿರಿ: ಜಿಲ್ಲೆಯಲ್ಲಿ ಇಂದು ಕೂಡ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

ಸೋಂಕಿತರೆಲ್ಲರೂ ಅಂತರ ರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಮಹಾರಾಷ್ಟ್ರದ ಮುಂಬಯಿ, ಪುಣೆ ಮತ್ತು ಸೊಲ್ಲಾಪುರಿಂದ ಜಿಲ್ಲೆಗೆ ಹಿಂದಿರುಗಿರುವ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇಲ್ಲಿಯವರಿಗೆ ಕೊರೊನಾ ಸೋಂಕು ಖಚಿತಪಟ್ಟ ಒಟ್ಟು 163 ಪ್ರಕರಣಗಳ ಪೈಕಿ 9 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಸುರಪುರ ತಾಲೂಕಿನ ಬೇವಿನಾಳ ಎಸ್.ಕೆ. ಗ್ರಾಮದ 28 ವರ್ಷದ ಯುವಕ, 24 ವರ್ಷದ ಪುರುಷ, 28 ವರ್ಷದ ಪುರುಷ, ಯಾದಗಿರಿ ತಾಲೂಕಿನ ಸೈದಾಪೂರ ಗ್ರಾಮದ 24 ವರ್ಷದ ಮಹಿಳೆ, ಶಹಾಪೂರ ತಾಲೂಕಿನ ಉಕ್ಕಿನಾಳ ತಾಂಡಾದ 4 ವರ್ಷದ ಗಂಡು ಮಗು, ಗುರುಮಿಠ್ಠಕಲ್ ನಗರದ 46 ವರ್ಷದ ಪುರುಷ, ಯಾದಗಿರಿ ತಾಲೂಕಿನ ಮೋಟನಳ್ಳಿ ತಾಂಡಾದ 11 ವರ್ಷದ ಬಾಲಕ ಸೇರಿದಂತೆ ಇಂದು 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Leave a Reply

Your email address will not be published. Required fields are marked *

You May Also Like

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ರಾಮನಗರ: ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಆಗ್ರಹಿಸಲು ಕಾಂಗ್ರೆಸ್ ಪಕ್ಷ ಜನವರಿ 9 ರಿಂದ…

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!! ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು…

ಅರಳದಿನ್ನಿ : ಮಹಿಳಾ ಶೌಚಾಲಯ ಗೋಡೆ ಎತ್ತರಕ್ಕೆ ಆಗ್ರಹ

ಆಲಮಟ್ಟಿ : ಸಮೀಪದ ಅರಳದಿನ್ನಿ ಗ್ರಾಮದಲ್ಲಿನ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆಯನ್ನು ಎತ್ತರಿಸಬೇಕು ಹಾಗು ಹೊಸದೊಂದು…

ನಾಳೆ ಆಲಮಟ್ಟಿ ಎಂ.ಎಚ್.ಎಂ.ಪಿಯು ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಆಲಮಟ್ಟಿ : ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ…