ನವದೆಹಲಿ: ದೇಶವ್ಯಾಪಿ ಲಾಕ್‌ ಡೌನ್ ಕಾರಣದಿಂದಾಗಿ ಶಿಷ್ಟಾಚಾರದ ಪ್ರಕಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರು ಪ್ರಕರಣ ಆಲಿಸಿ ತೀರ್ಪು ನೀಡುತ್ತಿದ್ದರು. ಹೀಗಾಗಿ ಲಾಕ್‌ ಡೌನ್‌ ತೆರವಾಗುವ ವರೆಗೆ ಇದೇ ಮಾದರಿಯಲ್ಲಿ ನ್ಯಾಯಾಲಯದ ಕಾರ್ಯ ಚಟುವಟಿಕೆಗಳನ್ನ ಮುಂದುವರೆಸಲು ಅಪೆಕ್ಸ್‌ ಕೋರ್ಟ್‌ ತೀರ್ಮಾನಿಸಿದೆ. ಜೂನ್‌ 19ರ ವರೆಗೆ ಹೀಗೆ ಮುಂದುವರೆಸಲು ಆದೇಶ ಹೊರಡಿಸಲಾಗಿದೆ.

ಸರ್ವೋಚ್ಛ ನ್ಯಾಯಾಲಯ ಕರೋನಾ ಮತ್ತು ಲಾಕ್‌ ಡೌನ್‌ ಕಾರಣದಿಂದಾಗಿ ನ್ಯಾಯಾಧೀಶರ ಬೇಸಿಗೆ ರಜೆ ರದ್ದು ಪಡಿಸಿತ್ತು. ಹೀಗಾಗಿ ಮೇ 18 ಅಂದರೆ ಸೋಮವಾರದಿಂದ ಬೇಸಿಗೆ ರಜೆ ತೆಗೆದುಕೊಳ್ಳಲು ಹೇಳಲಾಗಿತ್ತು. ಅದರೀಗ ಅದನ್ನೂ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಜೂನ್‌ 19ರ ವರೆಗೆ ಪ್ರಕರಣಗಳನ್ನ ಆಲಿಸಿ ತೀರ್ಪು ನೀಡಲಿದೆ. ಈಗಾಗಲೇ ಲಾಕ್‌ ಡೌನ್‌ ನಿಂದಾಗಿ ಹಲವು ಪ್ರಕರಣಗಳು ಕೋರ್ಟಿನ ಮೆಟ್ಟಿಲೇರಿದ್ದು, ತೀರ್ಪು ಹೊರ ಬೀಳಲು ಬಾಕಿ ಇದೆ. ಇನ್ನು ದೆಹಲಿ, ಗುಜರಾತ್‌, ಬಾಂಬೆ, ಮದ್ರಾಸ್‌ ಹೈ ಕೋರ್ಟ್‌ ತಮ್ಮ ಬೇಸಿಗೆ ರಜೆ ರದ್ದುಗೊಳಿಸಿರೋದಾಗಿ ಈ ಹಿಂದೆಯೇ ಹೇಳಿತ್ತು. ಇದೀಗ ಸುಪ್ರೀಂ ಕೋರ್ಟ್‌ ಕೂಡ ತಮ್ಮ ರಜೆಯನ್ನು ರದ್ದುಗೊಳಿಸಿ ಜೂನ್‌ 19ರ ವರೆಗೆ ಕಾರ್ಯನಿರ್ವಹಿಸಲಿದೆ.

Leave a Reply

Your email address will not be published. Required fields are marked *

You May Also Like

ಮಹಾರಾಷ್ಟ್ರದಲ್ಲಿ ಕೊರೋನಾ ಪಾಸಿಟಿವ್ 11,506ಕ್ಕೆ ಏರಿಕೆ

ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಒಂದೇ ದಿನ 1008 ಜನರಲ್ಲಿ ವೈರಸ್ ಪತ್ತೆಯಾಗಿದೆ. ಈ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಪ್ರತೀನಿತ್ಯ ಏರಿಕೆಯಾಗುತ್ತಲೇ ಇದೆ. ಈವರೆಗೆ ಮಹಾರಾಷ್ಟ್ರದಲ್ಲಿ ಪತ್ತೆಯಾದ ಕೊರೋನಾ ಪಾಸಿಟಿವ್ ಸಂಖ್ಯೆ ಎಷ್ಟು ಗೊತ್ತಾ..?

ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಂಡರೆ ಹುಷಾರ್!

ನವದೆಹಲಿ : ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯನ್ನು ಕೊಲೆ ಮಾಡಿ ರುಂಡ ಒಯ್ದ ಪಾಪಿ!

ಲಕ್ನೋ : ತುಂಡು ತುಂಡಾದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವವೊಂದು ಪತ್ತೆಯಾಗಿರುವ ಘಟನೆ ನಡೆದಿದೆ.

ಸಿಎಂ ಪರಿಹಾರ ನಿಧಿಗೆ ಕೆ.ಎಸ್.ಆರ್.ಟಿ.ಸಿ ಯಿಂದ 9.85 ಲಕ್ಷ ಸಹಾಯ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗದ ಅಧಿಕಾರಿಗಳು ಹಾಗು ಸಿಬ್ಬಂಧಿ ಸೇರಿ ಒಂದು ದಿನದ ವೇತನವನ್ನು ಸಿಎಂ ಅವರ ಕೋವಿಡ್19 ಪರಿಹಾರ ನಿಧಿಗೆ ನೀಡಿದ್ದಾರೆ.