ನವದೆಹಲಿ: ದೇಶವ್ಯಾಪಿ ಲಾಕ್‌ ಡೌನ್ ಕಾರಣದಿಂದಾಗಿ ಶಿಷ್ಟಾಚಾರದ ಪ್ರಕಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರು ಪ್ರಕರಣ ಆಲಿಸಿ ತೀರ್ಪು ನೀಡುತ್ತಿದ್ದರು. ಹೀಗಾಗಿ ಲಾಕ್‌ ಡೌನ್‌ ತೆರವಾಗುವ ವರೆಗೆ ಇದೇ ಮಾದರಿಯಲ್ಲಿ ನ್ಯಾಯಾಲಯದ ಕಾರ್ಯ ಚಟುವಟಿಕೆಗಳನ್ನ ಮುಂದುವರೆಸಲು ಅಪೆಕ್ಸ್‌ ಕೋರ್ಟ್‌ ತೀರ್ಮಾನಿಸಿದೆ. ಜೂನ್‌ 19ರ ವರೆಗೆ ಹೀಗೆ ಮುಂದುವರೆಸಲು ಆದೇಶ ಹೊರಡಿಸಲಾಗಿದೆ.

ಸರ್ವೋಚ್ಛ ನ್ಯಾಯಾಲಯ ಕರೋನಾ ಮತ್ತು ಲಾಕ್‌ ಡೌನ್‌ ಕಾರಣದಿಂದಾಗಿ ನ್ಯಾಯಾಧೀಶರ ಬೇಸಿಗೆ ರಜೆ ರದ್ದು ಪಡಿಸಿತ್ತು. ಹೀಗಾಗಿ ಮೇ 18 ಅಂದರೆ ಸೋಮವಾರದಿಂದ ಬೇಸಿಗೆ ರಜೆ ತೆಗೆದುಕೊಳ್ಳಲು ಹೇಳಲಾಗಿತ್ತು. ಅದರೀಗ ಅದನ್ನೂ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಜೂನ್‌ 19ರ ವರೆಗೆ ಪ್ರಕರಣಗಳನ್ನ ಆಲಿಸಿ ತೀರ್ಪು ನೀಡಲಿದೆ. ಈಗಾಗಲೇ ಲಾಕ್‌ ಡೌನ್‌ ನಿಂದಾಗಿ ಹಲವು ಪ್ರಕರಣಗಳು ಕೋರ್ಟಿನ ಮೆಟ್ಟಿಲೇರಿದ್ದು, ತೀರ್ಪು ಹೊರ ಬೀಳಲು ಬಾಕಿ ಇದೆ. ಇನ್ನು ದೆಹಲಿ, ಗುಜರಾತ್‌, ಬಾಂಬೆ, ಮದ್ರಾಸ್‌ ಹೈ ಕೋರ್ಟ್‌ ತಮ್ಮ ಬೇಸಿಗೆ ರಜೆ ರದ್ದುಗೊಳಿಸಿರೋದಾಗಿ ಈ ಹಿಂದೆಯೇ ಹೇಳಿತ್ತು. ಇದೀಗ ಸುಪ್ರೀಂ ಕೋರ್ಟ್‌ ಕೂಡ ತಮ್ಮ ರಜೆಯನ್ನು ರದ್ದುಗೊಳಿಸಿ ಜೂನ್‌ 19ರ ವರೆಗೆ ಕಾರ್ಯನಿರ್ವಹಿಸಲಿದೆ.

Leave a Reply

Your email address will not be published. Required fields are marked *

You May Also Like

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: 32 ಆರೋಪಿಗಳು ಖುಲಾಸೆ

ವಿವಾದಕ್ಕೆ ಸಂಬಂಧಿಸಿದಂತೆ ಆಪಾದಿತ ಎಲ್ಲಾ 32 ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಈ ಮೂಲಕ ಕೋರ್ಟ್ ನೀಡಿದ ಈ ತೀರ್ಪು ನಿಂದಾಗಿ 28 ವರ್ಷಗಳ ಸುದೀರ್ಘ ಪ್ರಕರಣಕ್ಕೆ ತೆರೆ ಎಳೆದಂತಾಗಿದೆ. ಹಾಗೇ ಪ್ರಕರಣದ ಪ್ರಮುಖ ದೋಷಿಗಳಾದ ಅಡ್ವಾಣಿ, ಉಮಾಭಾರತಿ, ಮುರುಳಿ ಮನೋಹರ್ ಜೋಷಿ ಸೇರಿದಂತೆ ಇತರರು ನಿರಾಳರಾಗಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಜಿ.ಎಸ್.ಟಿ. ದ್ರೋಹ: ಸಿದ್ದರಾಮಯ್ಯ

ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ನೀಡಲು ಸಂಗ್ರಹ ಮಾಡಿದ್ದ ಸೆಸ್ ಹಣವನ್ನು @narendramodi ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಸಿಎಜಿ ನೀಡಿರುವ ವರದಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಬಗೆದಿರುವ ಜಿ ಎಸ್ ಟಿ ದ್ರೋಹಕ್ಕೆ ಪುರಾವೆಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅಕ್ಟೋಬರ್ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ?

ಬೆಂಗಳೂರು: ಕೊರೊನಾ ಕಾರಣದಿಂದ ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಲಾಗಿತ್ತು. ಇದಕ್ಕೆ ವಿರೋಧ ಪಕ್ಷದಿಂದ ವ್ಯಾಪಕ ವಿರೋಧವು…

ಗರ್ಭಿಣಿಯರನ್ನು ಬಿಸಿಲಿನಲ್ಲಿಯೇ ಕಾದು ಕುಳಿತುಕೊಳ್ಳುವಂತೆ ಮಾಡಿದ ಆಸ್ಪತ್ರೆ ಸಿಬ್ಬಂದಿ!

ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬಂದ ಗರ್ಭಿಣಿಯರು ಕಾದು ಕಾದು ಸುಸ್ತಾದ ಘಟನೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.