ಭಾರತೀಯ ಯೋಧರ ದಾಳಿಗೆ , ಹಿಜ್ಬುಲ್ ಮುಜಾಹಿದ್ದೀನ್ ಅತ್ಯುಗ್ರ ರಿಯಾಜ್ ನಾಯ್ಕೂ ಹತ

ಹೊಸದಿಲ್ಲಿ: ಭಾರತದ ಶತ್ರು, ಹಿಜ್ಬುಲ್ ಮುಜಾಹಿದ್ದೀನ್ ಅತ್ಯುಗ್ರ ರಿಯಾಜ್ ನಾಯ್ಕೂನನ್ನು ಭದ್ರತಾ ಪಡೆ ಯೋಧರು ಮುಗಿಸಿದ್ದಾರೆ. ಪುಲ್ವಾಮಾ ಬಳಿ ನಡೆದ ಎನ್ಕೌಂಟರಿನಲ್ಲಿ ಭಾರತೀಯ ಯೋಧರ ದಾಳಿಗೆ ಉತ್ತರ ನೀಡಲಾಗದೇ ಉಗ್ರ ರಿಯಾಜ್ ನಾಯ್ಕೂ ಹತನಾಗಿದ್ದಾನೆ. ದೊರೆತ ಖಚಿತ ಸುಳಿವನ್ನಾಧರಿಸಿ ಯೋಧರು ಮುಂಜಾನೆಯಿಂದಲೇ ಉಗ್ರರು ಅಡಗಿದ್ದ ಪ್ರದೇಶವನ್ನು ಸುತ್ತುವರೆದು ಶರಣಾಗುವಂತೆ ಉಗ್ರರಿಗೆ ಸೂಚನೆ ನೀಡಿದ್ದರು. ಆದರೆ ಉಗ್ರಗಾಮಿಗಳು ಗುಂಡು ಹಾರಿಸಲು ಮುಂದಾದ ಕಾರಣ ಎನ್‍ಕೌಂಟರ್ ನಡೆದು ಅದರಲ್ಲಿ ರಿಯಾಜ್ ಸೇರಿದಂತೆ ಮೂವರು ಭಯೋತ್ಪಾದಕರು ಹತರಾದರು.

Exit mobile version