ದಾವಣಗೆರೆ : ಹಸಿರು ವಲಯದಲ್ಲಿ ಇದ್ದ ದಾವಣಗೆರೆ ಜಿಲ್ಲೆಗೂ ಮಹಾಮಾರಿ ವಕ್ಕರಿಸಿಕೊಂಡಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಈ ಮೂಲಕ ಜಿಲ್ಲೆಯಲ್ಲಿ ಮೊದಲ ಪ್ರಕರಣ ಖಾತೆ ತೆರೆದಿದೆ. ಇವರು ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಅವರ ಗಂಟಲ ದ್ರವ ಹಾಗೂ ರಕ್ತದಅ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ಆದರೆ, ಅವರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.

ಇವರಿಗೆ ಪತಿ ಹಾಗೂ 18 ವರ್ಷದ ಮಗ ಇದ್ದಾನೆ. ಸದ್ಯ ಇವರು ವಾಸವಿದ್ದ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆಗೆ ಬಂದಿದ್ದ ರೋಗಿಗಳ ಸಂಪರ್ಕದಿಂದಲೇ ಇವರಿಗೆ ಸೋಂಕು ತಗುಲಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಸದ್ಯ ಇವರ ಜೊತೆ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕಕ್ಕೆ ಬಂದವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ.

Leave a Reply

Your email address will not be published. Required fields are marked *

You May Also Like

ಬಿಜೆಪಿಯ ಉಷಾ ದಾಸರಗೆ ಅಧ್ಯಕ್ಷ ಗದ್ದುಗೆ ಪಕ್ಕಾ ! ಕಾಂಗ್ರೆಸ್ ಪಟ್ಟಕ್ಕೆರಲು ಕೊನೆಯ ಕಸರತ್ತು

ಉತ್ತರಪ್ರಭಗದಗ: ಗದಗ ಬೆಟಗೇರಿ ನಗರ ಸಭೆಯ 35 ವಾರ್ಡಗಳಲ್ಲಿ 18 ವಾರ್ಡಗಳಲ್ಲಿ ಬಿಜೆಪಿ, 15 ವಾರ್ಡಗಳಲ್ಲಿ…

ರಾಜ್ಯದಲ್ಲಿ ಮೂರು ದಿನಗಳ ಕಾಲ ಇರಲಿದೆ ಭರಣಿಯ ಆರ್ಭಟ! ಬೆಂಗಳೂರು : ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ರಾಜ್ಯದಲ್ಲಿ ಮೂರು ದಿನಗಳ ಕಾಲ ಇರಲಿದೆ ಭರಣಿಯ ಆರ್ಭಟ!ಬೆಂಗಳೂರು : ರಾಜ್ಯದಲ್ಲಿ ಇನ್ನೂ ಮೂರು ದಿನಗಳ…

ಸಿಬಿಎಸ್ಸಿ: ಅವಳಿ-ಜವಳಿ ಸಹೋದರಿಯರ ಸೇಮ್ ಸ್ಕೋರ್:ಎಲ್ಲ ವಿಷಯದಲ್ಲಿ ಇಬ್ಬರಿಗೂ ಒಂದೇ ಅಂಕ!

ನೋಯ್ಡಾ: ನೋಡಲು ಒಂದೇ ತರಹ, ಝೆರಾಕ್ಸ್ ಕಾಪಿ ಅಂತಾರಲ್ಲ ಹಂಗೇ. ನಗು, ಕಣ್ಣೋಟ, ಮನಸು, ಮನಸಿನ ಸೊಗಸು, ಮನಸಿನ ಮುನಿಸು…ಎಲ್ಲವೂ ಒಂದೇ ಅಂದರೆ ಒಂದೇ. ಇವರಿಬ್ಬರ ಕನಸೂ ಒಂದೇ, ಇಂಜಿನಿಯರಿಂಗ್ ಓದುವುದು.