ಹಾವೇರಿ: ಲಾಕ್ ಡೌನ್ ಇದ್ದಾಗಲೂ ಅನವಶ್ಯಕವಾಗಿ ಬೈಕ್ ನಲ್ಲಿ ಓಡಾಡುತ್ತಿದ್ದ ಯುವಕನಿಗೆ ಓಡಾಡದಂತೆ ಸೂಚನೆ ನೀಡಿದ ಪೊಲೀಸರಿಗೆ ಯುವಕ ನೀವು ವಾಚಮನ್ ಇದ್ದ ಹಾಗೆ ಎಂದು ಆವಾಜ್ ಹಾಕಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಯಡಚಿ ಕ್ರಾಸ್ ಬಳಿ ಘಟನೆ ನಡೆದಿದೆ. ಸುಖಾಸುಮ್ಮನೆ ತಿರುಗಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ರಟ್ಟಿಹಳ್ಳಿ ಪಟ್ಟಣದ ನಿವಾಸಿ ಜಬೀವುಲ್ಲಾ ಮೆಹಬೂಬಸಾಬ್ ಖಾಜಿ ಎಂಬ ಯುವಕ ಪುಂಡಾಟಿಕೆ ಮೆರೆದಿದ್ದಾನೆ. ವಾಹನ ತಪಾಸಣೆ ಕರ್ತವ್ಯದಲ್ಲಿ ನಿರತರಾಗಿದ್ದಾಗ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಸಿ, ನೀವೆಲ್ಲಾ ವಾಚಮನ್ಗಳಿದ್ದಂತೆ ಲಾಕ್ಡೌನ್ ಮುಗಿದ ಮೇಲೆ ನಿಮ್ಮನ್ನ ನೋಡ್ಕೊಳ್ತಿನಿ ಎಂದು ಆವಾಜ್ ಹಾಕಿದ್ದಾನೆ. ಕರ್ತವ್ಯದಲ್ಲಿದ್ದ ಪೊಲೀಸರಿಗೆ ಹಾಗೂ ಹೋಂ ಗಾರ್ಡ್ಸ್ಗಳ ಮೇಲೆ ಪುಂಡಾಟಿಕೆ ಮೆರೆದ ಯುವಕನನ್ನು ಎಎಸ್ಐ ಬಿ.ಎಸ್.ಮಡ್ಡೇರ ನೇತೃತ್ವದಲ್ಲಿ ಬಂಧಿಸಲಾಯಿತು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.